
ಮುರುಘಾ ಶ್ರೀಗಳಿಗೆ ಬಂಧನ ಭೀತಿ, ಪೋಕ್ಸೋ ಕೇಸಲ್ಲಿ ಸಂಧಾನಕ್ಕೆ ಅವಕಾಶ ಇದೆಯಾ..?
ಅಪ್ರಾಪ್ತೆ ಬಾಲಕಿಯರ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮುರುಘಾ ಶ್ರೀಗಳಿಗೆ ಬಂಧನ ಭೀತಿ ಎದುರಾಗಿದೆ. ಪ್ರಕರಣದಲ್ಲಿ ಇಂದಿನ ಬೆಳವಣಿಗೆ,ಈದ್ಗಾ ಮೈದಾನದಲ್ಲಿನ ಗಣೇಶೋತ್ಸವ ಸೇರಿದಂತೆ ಇಂದಿನ ನ್ಯೂಸ್ ಹವರ್ ಇಲ್ಲಿದೆ.
ಮಠದ ಅಂತರ್ಯುದ್ಧ ವಿಷಯವಾಗಿ ಸಂಧಾನಕ್ಕೆ ಅವಕಾಶ ಇದೆ. ಆದರೆ ಕ್ರಿಮಿನಲ್ ಕೇಸ್ನಲ್ಲಿ ಆರೋಪಿಗಳು-ದೂರುದಾರರ ಮಧ್ಯೆ ಸಂಧಾನ ಸಾಧ್ಯವಾ..?ಪೋಕ್ಸೋ ಕಾಯ್ದೆ ಪ್ರಕಾರ ಯಾವುದೇ ಕಾರಣಕ್ಕೂ ಸಂಧಾನಕ್ಕೆ ಅವಕಾಶ ಇಲ್ಲ. ಪೋಕ್ಸೋ ಕಾಯ್ದೆ ಪ್ರಕಾರ ಸಂತ್ರಸ್ಥೆ ನೀಡುವ ಹೇಳಿಕೆಯೇ ನಿರ್ಣಾಯಕವಾಗಿದೆ. ಇನ್ನು ಪೋಕ್ಸೋ ಕಾಯ್ದೆಯಡಿ ಎಫ್ಐಆರ್ನಲ್ಲಿ ಬಿ ರಿಪೋರ್ಟ್ ಸಲ್ಲಿಕೆಗೆ ಅವಕಾಶವಿಲ್ಲ.
Add Asianetnews Kannada as a Preferred Source
