Asianet Suvarna News Asianet Suvarna News

Reverse Operation: ಡಿಕೆಶಿ, ಸಿದ್ದುಗೆ ತಳಮಳ, ಅವರ ಹೇಳಿಕೆಗೆ ಬೆಲೆಯಿಲ್ಲ: ಎಸ್‌ಟಿ ಸೋಮಶೇಖರ್

ರಾಜ್ಯದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ (Assembly Election) ಇನ್ನೂ ಒಂದೂಕಾಲು ವರ್ಷ ಬಾಕಿ ಇರುವಾಗಲೇ ಪಕ್ಷಾಂತರದ ಬಗ್ಗೆ ಏಕಾಏಕಿ ಬಿರುಸಿನ ಚರ್ಚೆ ಆರಂಭವಾಗಿದೆ.

ಬೆಂಗಳೂರು (ಜ. 26): ರಾಜ್ಯದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ (Assembly Election) ಇನ್ನೂ ಒಂದೂಕಾಲು ವರ್ಷ ಬಾಕಿ ಇರುವಾಗಲೇ ಪಕ್ಷಾಂತರದ ಬಗ್ಗೆ ಏಕಾಏಕಿ ಬಿರುಸಿನ ಚರ್ಚೆ ಆರಂಭವಾಗಿದೆ. 'ವಿಜಯಪುರದ ಬಿಜೆಪಿ ಶಾಸಕ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ & ಜೆಡಿಎಸ್‌ನಿಂದ ವಲಸೆ ಬಂದವರ ಪೈಕಿ ಕೆಲವರು ವಾಪಸ್‌ ಹೋಗಲಿದ್ದಾರೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ (Yathnal)ನೀಡಿ ಹೇಳಿಕೆಗೆ ಇದೀಗ ಈ ಚರ್ಚೆಗೆ ಕಾರಣವಾಗಿದೆ.

Siddaramaiah Big Scoop: ಬಿಜೆಪಿ-ಕಾಂಗ್ರೆಸ್ ನಡುವೆ ಪಕ್ಷಾಂತರ ಬಾಂಬ್, ಏನಿದು ರಿವರ್ಸ್ ಆಪರೇಷನ್.?

ಡಿಕೆಶಿ, ಸಿದ್ದರಾಮಯ್ಯಗೆ ತಳಮಳ ಶುರುವಾಗಿದೆ. ಜಾರಕಿಹೊಳಿ ಸಂಪರ್ಕದಲ್ಲಿ 16 ಮಂದಿ ಶಾಸಕರಿದ್ದಾರೆ. ಅವರು ಪಕ್ಷ ಬಿಟ್ಟು ಹೋಗುವ ಭಯ ಇವರನ್ನು ಕಾಡುತ್ತಿದೆ. ಹಾಗಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ' ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. 

Video Top Stories