
ಮೈಷುಗರ್ ವಿಚಾರದಲ್ಲಿ ಸಂಸದೆ ಸುಮಲತಾ ವಿರುದ್ಧ ತಿರುಗಿಬಿದ್ರ ಜನ?
ಮೈಷುಗರ್ ಖಾಸಗಿಕರಣಕ್ಕೆ ಸಂಸದೆ ಸುಮಲತಾ ಒಲವು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಸುಮಲತಾ ವಿರುದ್ಧ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು (ಜೂ. 12): ಮೈಷುಗರ್ ಖಾಸಗಿಕರಣಕ್ಕೆ ಸಂಸದೆ ಸುಮಲತಾ ಒಲವು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಸುಮಲತಾ ವಿರುದ್ಧ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೊನಾ ಭೀತಿಯ ನಡುವೆಯೂ ಜಾತ್ರೆ ಮಾಡಿ ಸಂಭ್ರಮಿಸಿದ ಜನ
ನಯ, ನಾಜೂಕಿನಿಂದ ಮಾತನಾಡಿ ಸಂಸದರು ರೈತರನ್ನು ಯಾಮಾರಿಸುವ ಪ್ರಯತ್ನ ಮಾಡ್ತಿದ್ದಾರೆ. ಸುಮಲತಾಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಆಸಕ್ತಿಯೇ ಇಲ್ಲ. ಮೈಷುಗರ್ ಬಗ್ಗೆ ಜನರಿಗಿರುವ ಭಾವನಾತ್ಮಕ ಸಂಬಂಧ ಹಾಳು ಮಾಡಲು ಸುಮಲತಾ ಹೊರಟಿದ್ದಾರೆ. ರೈತರ ಗೋಳು, ರೈತರ ಸಂಕಷ್ಟ ಅಂತೆಲ್ಲಾ ನಯವಾಗಿ ಮಾತನಾಡಿ ಯಾಮಾರಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲೆ ಕಾರ್ಖಾನೆ ಉಳಿಸಿಕೊಳ್ಳುವ ಬಗ್ಗೆ ಸುಮಲತಾಗೆ ಎಳ್ಳಷ್ಟು ಆಸಕ್ತಿ ಇಲ್ಲ. ಮೈಷುಗರ್ ಖಾಸಗೀಕರಣದ ಉದ್ದೇಶದ ಹಿಂದೆ ಸಕ್ಕರೆ ಲಾಬಿ ಹುನ್ನಾರ ಇದೆ. ಸುಮಲತಾ ರೈತ ಕುಲಕ್ಕೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದು ರೈತರು ಆಕ್ರೋಶ ರೈತ ಮುಖಂಡೆ ಸುನಂದಾ ಜಯರಾಂ ಹೇಳಿದ್ದಾರೆ.