Asianet Suvarna News Asianet Suvarna News

Rain: ರಾಜ್ಯದಲ್ಲಿ ಮತ್ತೆ ಮಹಾ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ ಕೊಂಚ ಬ್ರೇಕ್ ಕೊಟ್ಟಿದ್ದ ವರುಣದೇವ, ಮತ್ತೆ ಅಬ್ಬರಿಸಲಿದ್ದಾನೆ. ಅದರ ಸೂಚನೆ ಚೆನ್ನೈನಲ್ಲಿ (Chennai) ಈಗಾಗಲೇ ಸಿಕ್ಕಿದೆ. ಬಂಗಾಳಕೊಲ್ಲಿಯಲ್ಲಿ ಎದ್ದ ತೂಫಾನ್ ಚಂಡಮಾರುತ ಚೆನ್ನೈನಲ್ಲಿ ಅವಾಂತರವನ್ನು ಸೃಷ್ಟಿಸಿದೆ. 

ಬೆಂಗಳೂರು (ನ. 28): ರಾಜ್ಯದಲ್ಲಿ ಕೊಂಚ ಬ್ರೇಕ್ ಕೊಟ್ಟಿದ್ದ ವರುಣದೇವ, ಮತ್ತೆ ಅಬ್ಬರಿಸಲಿದ್ದಾನೆ. ಅದರ ಸೂಚನೆ ಚೆನ್ನೈನಲ್ಲಿ (Chennai) ಈಗಾಗಲೇ ಸಿಕ್ಕಿದೆ. ಬಂಗಾಳಕೊಲ್ಲಿಯಲ್ಲಿ ಎದ್ದ ತೂಫಾನ್ ಚಂಡಮಾರುತ (Cyclone) ಚೆನ್ನೈನಲ್ಲಿ ಅವಾಂತರವನ್ನು ಸೃಷ್ಟಿಸಿದೆ. 

Chamarajnagar: ಕೊಚ್ಚಿ ಹೋದ ಸೇತುವೆ, ಶಾಲಾ-ಮಕ್ಕಳ ಪರದಾಟ

ಕಳೆದ ನಾಲ್ಕು ದಿನಗಳಿಂದ ಮತ್ತೆ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ತಮಿಳುನಾಡು ಪುನಃ ಅಕ್ಷರಶಃ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಈವರೆಗೆ ಮಾನ್ಸೂನ್‌ ವೇಳೆ ಆಗಬೇಕಾದ ಸಾಮಾನ್ಯಕ್ಕಿಂತ ಶೇ.75  ರಷ್ಟುಹೆಚ್ಚುವರಿ ಮಳೆಯಾಗಿದ್ದು, 3 ದಿನದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಕರಾವಳಿ ಭಾಗಗಳಲ್ಲಿ ನ.29ರವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.

Video Top Stories