Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು, ಟಕ್ಕರ್‌ ಕೊಡಲು ಸಿದ್ದರಾಮಯ್ಯ ಅಹಿಂದ ಪ್ಲ್ಯಾನ್

 ಸಿದ್ದು ಸಿಎಂ ವಿವಾದದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಮೂಲ- ವಲಸಿಗ ಚರ್ಚೆಯೂ ಶುರುವಾಗಿದೆ. ನಾವೂ ಕೂಡಾ ರೇಸ್‌ನಲ್ಲಿದ್ದೀವೆ ಅಂತಿದ್ದಾರೆ ದಲಿತ ನಾಯಕರು. 

ಬೆಂಗಳೂರು (ಜೂ. 29): ಸಿದ್ದು ಸಿಎಂ ವಿವಾದದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಮೂಲ- ವಲಸಿಗ ಚರ್ಚೆಯೂ ಶುರುವಾಗಿದೆ. ನಾವೂ ಕೂಡಾ ರೇಸ್‌ನಲ್ಲಿದ್ದೀವೆ ಅಂತಿದ್ದಾರೆ ದಲಿತ ನಾಯಕರು. ಸಿದ್ದರಾಮಯ್ಯಗೆ ಟಾಂಗ್ ಕೊಡಲು ಹಿರಿಯ ನಾಯಕರು ದಲಿತ ಸಿಎಂ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ಧಾರೆ. ಇದಕ್ಕೆ ಬಿಕೆ ಹರಿಪ್ರಸಾದ್ ಬೆಂಬಲ ಸೂಚಿಸಿದ್ದಾರೆ. ದಲಿತ ಸಿಎಂ ಅಸ್ತ್ರಕ್ಕೆ ಪ್ರತಿಯಾಗಿ ಅಹಿಂದ ಗಟ್ಟಿಗೊಳಿಸಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಕಾಂಗ್ರೆಸ್‌ ಮನೆಯೊಂದು ಮೂರು ಬಾಗಿಲಾಗಿದೆ ಎನ್ನುವಂತಾಗಿದೆ. 

ಇಂದು ಜಾರಕಿಹೊಳಿ- ಕಟೀಲ್ ಭೇಟಿ; ರಾಜೀನಾಮೆ ಪ್ರಹಸನಕ್ಕೆ ಬೀಳುತ್ತಾ ತೆರೆ.?

Video Top Stories