Asianet Suvarna News Asianet Suvarna News

ಸಿಎಂ ಯಡಿಯೂರಪ್ಪ ಕೈಯಲ್ಲಿ ಲಾಕ್‌ಡೌನ್ ಭವಿಷ್ಯ..!

ಬೆಂಗಳೂರು ಸೇರಿದಂತೆ ಕೆಲವೆಡೆ ಕೊರೋನಾ ಕೈತಪ್ಪಿ ಹೋಗಿದೆ ಎಂದು ವಿಧಾನಸೌಧದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ನಾಳೆ(ಜು.10) ಈ ವಿಚಾರದ ಕುರಿತಂತೆ ಸುದ್ದಿಘೋಷ್ಠಿಯಲ್ಲಿ ಸವಿವರವಾಗಿ ತಿಳಿಸುವುದಾಗಿ ಹೇಳಿದ್ದಾರೆ.

ಬೆಂಗಳೂರು(ಜು.09): ಕೊರೋನಾ ಹೆಮ್ಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಿದ್ರೆ ಮತ್ತೊಮ್ಮೆ ಲಾಕ್‌ಡೌನ್ ಮಾಡುತ್ತಾರಾ ಎನ್ನುವ ಪ್ರಶ್ನೆ ಶುರುವಾಗಿದೆ. ಆದರೆ ಈ ಗೊಂದಲಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ತೆರೆ ಎಳೆದಿದ್ದಾರೆ.

ಬೆಂಗಳೂರು ಸೇರಿದಂತೆ ಕೆಲವೆಡೆ ಕೊರೋನಾ ಕೈತಪ್ಪಿ ಹೋಗಿದೆ ಎಂದು ವಿಧಾನಸೌಧದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ನಾಳೆ(ಜು.10) ಈ ವಿಚಾರದ ಕುರಿತಂತೆ ಸುದ್ದಿಘೋಷ್ಠಿಯಲ್ಲಿ ಸವಿವರವಾಗಿ ತಿಳಿಸುವುದಾಗಿ ಹೇಳಿದ್ದಾರೆ.

ಸ್ಫೋಟಕ ಮಾಹಿತಿ ಹೊರಹಾಕಿದ ಸಿಎಂ ಯಡಿಯೂರಪ್ಪ..!

ಇಂದಿನ ಸಚಿವಸಂಪುಟ ಸಭೆಯಲ್ಲಿ ಲಾಕ್‌ಡೌನ್ ಬಿಟ್ಟು ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ನಡೆಯಲಿದೆ. ಲಾಕ್‌ಡೌನ್ ಸಾಧ್ಯಸಾಧ್ಯತೆಗಳ ಕುರಿತಂತೆ ಬಿಎಸ್‌ವೈ ಅಧಿಕೃತವಾಗಿ ಶುಕ್ರವಾರ ಘೋಷಣೆ ಮಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories