Asianet Suvarna News Asianet Suvarna News

News Hour: ಜಾತಿಗಣತಿ ಸ್ವೀಕಾರ.. ‘ಕೈ’ನಲ್ಲೇ ಕಿಚ್ಚು!

ಭಾರೀ ವಿರೋಧದ ನಡುವೆಯೇ ಜಾತಿ ಗಣತಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡಿದೆ. ಗುರುವಾರ ವಿಧಾನಸಭೆಯಲ್ಲಿಯೇ ಸಿಎಂ ಸಿದ್ಧರಾಮಯ್ಯ ಈ ವರದಿಯನ್ನು ಸ್ವೀಕರಿಸಿದ್ದಾರೆ.
 

ಬೆಂಗಳೂರು (ಫೆ.29): ವಿರೋಧದ ಮಧ್ಯೆಯೇ ಜಾತಿಗಣತಿ ಸ್ವೀಕಾರವಾಗಿದೆ.. ಸಿಎಂ ಸಿದ್ದರಾಮಯ್ಯಗೆ ಜಯಪ್ರಕಾಶ್ ಹೆಗ್ಡೆ ವರದಿ ಹಸ್ತಾಂತರಿಸಿದ್ದಾರೆ.  ಲೋಕಸಭಾ ಚುನಾವಣೆಗೂ ಮುನ್ನ ವರದಿ ಬಹಿರಂಗವಾಗೋದು ಅನುಮಾನ ಎನ್ನಲಾಗಿದೆ.

ಲಿಂಗಾಯತ,ಒಕ್ಕಲಿಗರ ವಿರೋಧ ನಡುವೆ ವರದಿ ಸ್ವೀಕಾರ ಮಾಡಲಾಗಿದೆ. ಈ ಹಿಂದೆ ವರದಿ ವಿರೋಧಿಸಿ ಒಕ್ಕಲಿಗ ನಾಯಕರ ಪತ್ರ ಸಮರ ನಡೆದಿತ್ತು. ಲಿಂಗಾಯತರ ಶಾಸಕರಿಂದಲೂ ಜಾತಿಗಣತಿಗೆ ವಿರೋಧ ವ್ಯಕ್ತವಾಗಿತ್ತು. ಪ್ರತಿ ಜಿಲ್ಲೆಗೆ ಒಂದರಂತೆ 1 ಪುಸ್ತಕದಲ್ಲಿ ಸರ್ಕಾರಕ್ಕೆ ವರದಿ ಇದೆ.

ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ; 2 ಮೂಟೆಗಳಲ್ಲಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗಡೆ

30 ಜಿಲ್ಲೆಗಳಿಗೆ 30 ಪುಸ್ತಕಗಳಲ್ಲಿ ಜಾತಿಗಣತಿ ರಿಪೋರ್ಟ್​. ಜಾತಿಗಣತಿ ವರದಿಯಲ್ಲಿ ಜಾತಿವಾರು ಜನಸಂಖ್ಯೆ ವಿವರ ನೀಡಲಾಗಿದೆ. ಜಾತಿ/ವರ್ಗಗಳ ಲಕ್ಷಣಗಳು, SC-ST ಜಾತಿ ವರ್ಗಗಳು . ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳ ಮಾಹಿತಿ ಇದೆ. ಜಯಪ್ರಕಾಶ್ ಹೆಗ್ಡೆ  ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.