
ದಳಪತಿಗಳಿಗೆ ಶಾಕ್! ಜೆಡಿಎಸ್ಗೆ ಇನ್ನೊಬ್ಬ ಶಾಸಕ ಮನೋಹರ್ ವಿದಾಯ?
ಜೆಡಿಎಸ್ ತೊರೆದು ಬಿಜೆಪಿ, ಕಾಂಗ್ರೆಸ್ಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಉಪಚುನಾವಣೆ ಮುಗಿದ ಬೆನ್ನಲ್ಲೇ ಜೆಡಿಎಸ್ಗೆ ಮತ್ತೊಂದು ಶಾಕ್ ಆಗಿದೆ.
ಬೆಂಗಳೂರು (ನ. 07): ಜೆಡಿಎಸ್ (JDS) ತೊರೆದು ಬಿಜೆಪಿ, ಕಾಂಗ್ರೆಸ್ಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಉಪಚುನಾವಣೆ ಮುಗಿದ ಬೆನ್ನಲ್ಲೇ ಜೆಡಿಎಸ್ಗೆ ಮತ್ತೊಂದು ಶಾಕ್ ಆಗಿದೆ. ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀನಿವಾಸ್ ಜೆಡಿಎಸ್ ತೊರೆಯುವುದು ಖಚಿತವಾಗಿರುವಾಗಲೇ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ (CR Manohar) ಬಿಜೆಪಿಗೆ ವಲಸೆ ಹೋಗಲು ಸಜ್ಜಾಗಿದ್ದಾರೆ.
Add Asianetnews Kannada as a Preferred Source

Mangaluru: ಸುರತ್ಕಲ್ ಸರ್ಕಲ್ಗೆ ಸಾವರ್ಕರ್ ಹೆಸರು: ಕಾಂಗ್ರೆಸ್ ತೀವ್ರ ಆಕ್ಷೇಪ, ಹೋರಾಟದ ಎಚ್ಚರಿಕೆ
'ಅಧಿಕಾರ ಇದ್ದಾಗ ನಮ್ಮನ್ನು ದೂರ ಇಟ್ಟಿದ್ದರಿಂದ ಬೇಜಾರಾಗಿದೆ. ನಮ್ಮನ್ನು ಕೈಕಾಲು ಕಟ್ಟಿ ಮೂಲೆಗುಂಪು ಮಾಡಿದ್ದರು. ಮಾನಸಿಕವಾಗಿ ಜಡಿಎಸ್ ಪಕ್ಷದಿಂದ ದೂರ ಇದ್ದಿದ್ದು ನಿಜ. ಸಹಜವಾಗಿ ಬೇರೆ ಪಕ್ಷದವರು ಆಹ್ವಾನ ಮಾಡಬಹುದು. ಆದರೆ ಬಿಜೆಪಿ ಸೇರಿದ್ದೇನೆ ಎನ್ನುವುದು ಕೇವಲ ವದಂತಿ' ಎಂದು ಮನೋಹರ್ ಸ್ಪಷ್ಟನೆ ನೀಡಿದ್ದಾರೆ.