
'217 ಯೋಜನೆಗಳಿಗೆ ಒಂದೇ ಕುಟುಂಬದ ಹೆಸರಿಡಲು ಈ ದೇಶ ಒಂದೇ ಕುಟುಂಬದ ಆಸ್ತಿಯೇನ್ರಿ.'?
'ಸಿದ್ದರಾಮಯ್ಯನವರು ಹಿರಿಯರು. ದೊಡ್ಡ ಜನ. ಅವರಷ್ಟು ನಾನು ಬುದ್ಧಿವಂತನಲ್ಲ. ನನಗಿರುವುದು ಅಲ್ಪ ಜ್ಞಾನ. ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದಷ್ಟು ಸೂಕ್ಷ್ಮತೆ ಇದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಆ. 16): ಸಿದ್ದರಾಮಯ್ಯನವರು ಹಿರಿಯರು. ದೊಡ್ಡ ಜನ. ಅವರಷ್ಟು ನಾನು ಬುದ್ಧಿವಂತನಲ್ಲ. ನನಗಿರುವುದು ಅಲ್ಪ ಜ್ಞಾನ. ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದಷ್ಟು ಸೂಕ್ಷ್ಮತೆ ಇದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
Add Asianetnews Kannada as a Preferred Source

ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ, ಹೇಳಿದ್ದೆಲ್ಲವೂ ಉಲ್ಟಾನೇ ಆಗುತ್ತೆ: ಸಿ.ಟಿ ರವಿ
217 ಯೋಜನೆಗಳಿಗೆ ಒಂದೇ ಕುಟುಂಬದ ಹೆಸರಿಟ್ಟರೆ ಹಾಗಾದರೆ ಉಳಿದವರ್ಯಾರು ದೇಶಕ್ಕಾಗಿ ತ್ಯಾಗ, ಹೋರಾಟ ಮಾಡಿಯೇ ಇಲ್ವಾ..? ಈ ದೇಶ ಒಂದು ಕುಟುಂಬದ ಆಸ್ತಿಯಲ್ಲ' ಎಂದು ಕುಟುಕಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ವಿಚಾರವಾಗಿ ಸಿ. ಟಿ ರವಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.