Asianet Suvarna News Asianet Suvarna News

ಗೋವಿಂದರಾಜನಗರ ಕ್ಷೇತ್ರದ ಬಡವರಿಗೆ ಫುಡ್ ಕಿಟ್ ವಿತರಿಸಿದ ವಿ ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಡವರು, ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ ಆಹಾರ ಧಾನ್ಯ ಕಿಟ್‌ಗಳನ್ನು ವಿತರಣೆ ಮಾಡಿದರು.

 

ಬೆಂಗಳೂರು (ಜೂ. 16): ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ವಾರ್ಡ್‌ನಲ್ಲಿನ ಮುತ್ತುಮಾರಮ್ಮ ದೇವಾಸ್ಥಾನದ ಬಳಿ ಮತ್ತು ವಿಜಯನಗರದ ಬಿಜಿಎಸ್‌ ಕಲ್ಯಾಣ ಮಂಟಪ ಸಮೀಪ ಕೋವಿಡ್‌ ಸಂಕಷ್ಟಕ್ಕೊಳಗಾದ ಬಡವರು, ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ ಆಹಾರ ಧಾನ್ಯ ಕಿಟ್‌ಗಳನ್ನು ವಿತರಣೆ ಮಾಡಿದರು.

ಬಡವರು, ಕೋವಿಡ್‌ ಸಂಕಷ್ಟಕ್ಕೊಳಗಾದವರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್‌ ವಿತರಣೆ ಮಾಡಲಾಗಿದೆ. ಒಂಭತ್ತು ವಾರ್ಡ್‌ಗಳಿಗೆ 30 ಸಾವಿರ ಕಿಟ್‌ಗಳನ್ನು ನೀಡಲಾಗಿದೆ. ದೈನಂದಿನ ಬಳಕೆಗೆ ಅಗತ್ಯ ಇರುವ ವಸ್ತುಗಳನ್ನು ವಿತರಣೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಸಹ ಸಂಕಷ್ಟದಲ್ಲಿದ್ದಾರೆ. ಅವರಿಗೂ ಆಹಾರ ಕಿಟ್‌ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಸೋಮಣ್ಣ ಹೇಳಿದ್ದಾರೆ.