Asianet Suvarna News Asianet Suvarna News

ಸಿಎಂ ಕುರ್ಚಿ ಬದಲಾವಣೆ ವದಂತಿ: ದೆಹಲಿಯಲ್ಲಿ ರೇಣುಕಾಚಾರ್ಯ, ಕುತೂಹಲ ಮೂಡಿಸಿದೆ ರಾಜ್ಯ ರಾಜಕೀಯ

ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಒಂದು ಕಡೆಯಾದರೆ, ಇನ್ನೊಂದು ಕಡೆ ದೆಹಲಿಯಲ್ಲೂ ರಾಜಕೀಯ ಶುರುವಾಗಿದೆ. ಶಾಸಕ ರೇಣುಕಾಚಾರ್ಯ, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. 

ಬೆಂಗಳೂರು (ಜು. 21): ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಒಂದು ಕಡೆಯಾದರೆ, ಇನ್ನೊಂದು ಕಡೆ ದೆಹಲಿಯಲ್ಲೂ ರಾಜಕೀಯ ಶುರುವಾಗಿದೆ. ಶಾಸಕ ರೇಣುಕಾಚಾರ್ಯ, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಸಾಧ್ಯತೆ ಇದೆ. ರೇಣುಕಾಚಾರ್ಯ ಸಿಎಂ ಆಪ್ತ ಬಳಗದಲ್ಲಿ ಕಾಣಿಸಿಕೊಂಡವರು. ಹಾಗಾಗಿ ಸಿಎಂ ಬದಲಾವಣೆ ಬೆನ್ನಲ್ಲೇ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.