Asianet Suvarna News Asianet Suvarna News

'ನನ್ನ ಮಗ ನನಗೆ ಬೇಕು, ತಂದು ಕೊಡಿ ಸ್ವಾಮಿ.... ಪ್ರವೀಣ್ ತಾಯಿ ಕಣ್ಣೀರು

ಪ್ರವೀಣ್ ಪಾರ್ಥೀವ ಶರೀರ ಬೆಳ್ಳಾರೆ ತಲುಪಿದೆ. ಗ್ರಾಮಸ್ಥರು, ಹಿಂದೂ ಕಾರ್ಯಕರ್ತರ ಆಕ್ರೋಶದ ಕಿಚ್ಚು ಜೋರಾಗಿದೆ. ಸರ್ಕಾರದ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರವೀಣ್ ಪಾರ್ಥೀವ ಶರೀರ ಬೆಳ್ಳಾರೆ ತಲುಪಿದೆ. ಗ್ರಾಮಸ್ಥರು, ಹಿಂದೂ ಕಾರ್ಯಕರ್ತರ ಆಕ್ರೋಶದ ಕಿಚ್ಚು ಜೋರಾಗಿದೆ. ಸರ್ಕಾರದ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರವೀಣ್ ಹತ್ಯೆ, ಹಿಂದೂ ಕಾರ್ಯಕರ್ತರ ಆಕ್ರೋಶ, ಬಿಜೆಪಿ ನಾಯಕರು ಸೈಲೆಂಟ್

ಬಹಳಷ್ಟು ಸಮಯದವರೆಗೆ ಪ್ರವೀಣ್ ತಂದೆ ತಾಯಿಗೆ ವಿಚಾರ ಗೊತ್ತಿರಲಿಲ್ಲ. ಅನಾರೋಗ್ಯ ಸಮಸ್ಯೆ ಇರುವುದರಿಂದ ಹೇಗಪ್ಪಾ ತಿಳಿಸೋದು ಎಂದು ಸಂಬಂಧಿಕರು, ಸ್ನೇಹಿತರು ಸುಮ್ಮನಿದ್ದರು. ಕೊನೆಗೆ ವಿಚಾರ ಗೊತ್ತಾದಾಗ  ಮನೆಯಲ್ಲಿ ಪ್ರವೀಣ್ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ನನ್ನ ಮಗ ನನಗೆ ನನಗೆ ಬೇಕು, ಅವನನ್ನು ವಾಪಸ್ ತಂದು ಕೊಡಿ, ಮಗನೇ ಬಂದು ಬಿಡಪ್ಪ' ಎಂದು ತಾಯಿ ಅಳೋದು ಮನಕಲಕುವಂತಿತ್ತು. 

Video Top Stories