ರಮ್ಮಿ ಚಟಕ್ಕೆ ಬಿದ್ದು ಒದ್ದಾಡಿದವನ ಕೊನೆಯ ಮಾತಿನಲ್ಲಿದೆ ಸರ್ಕಾರದ ಕಣ್ತೆರೆಸುವ ಸಂದೇಶ!

ಆನ್‌ಲೈನ್ ರಮ್ಮಿ ಚಟಕ್ಕೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಬದುಕು ಅಂತ್ಯಗೊಳಿಸಿದ ಘಟನೆ ಗದಗದಲ್ಲಿ ನಡೆದಿದೆ. ಆದರೆ ಈತನ ಕೊನೆಯ ನೋಟ್‌ನಲ್ಲಿ ಉಲ್ಲೇಖಿಸಿದ ಮಾತು ಸರ್ಕಾರದ ಕಣ್ತೆರೆಸುವಂತಿದೆ.
 

Share this Video
  • FB
  • Linkdin
  • Whatsapp

ಗದಗ(ಡಿ.03) ಆನ್‌ಲೈನ್ ರಮ್ಮಿ ಸರ್ಕಲ್ ಜೂಜಿಗೆ ಸಿಲುಕಿ ಹಲವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಈ ರೀತಿಯ ಆನ್‌ಲೈನ್ ಜೂಜಿನ ವಿರುದ್ದ ಹಲವು ಹೋರಾಟ, ಪ್ರತಿಭಟನೆಗಳು ನಡೆದಿದೆ. ಇದೀಗ ಗದಗದ ಶಿರಹಟ್ಟಿಯ 37 ವರ್ಷದ ಜಗದೀಶ್ ಹಳೇಮನಿ ಇದೇ ರಮ್ಮಿ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದಾರೆ. ಪಾತ್ರೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಗದೀಶ್ ಇದೇ ರಮ್ಮಯಿಂದ ಸಾಲದ ಸುಳಿಗೆ ಸಿಲುಕಿದ್ದ. ಇದರಿಂದ ಖಿನ್ನತೆಗೆ ಜಾರಿದ್ದ. ಇದೀಗ ಜಗದೀಶ್ ಬದುಕು ಅಂತ್ಯಗೊಳಿಸಿದ್ದಾನೆ. ಈತನ ಬರೆದಿವ ಲಾಸ್ಟ್ ನೋಟ್‌ನಲ್ಲಿ ಏನಿದೆ? ಸರ್ಕಾರಕ್ಕೆ ಮಾಡಿದ ಮನವಿ ಏನು?

Related Video