
ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಉತ್ತರ ಕರ್ನಾಟಕದ ಪವಿತ್ರ ಸ್ಥಳಗಳಿಂದ ಮಣ್ಣು ಸಂಗ್ರಹ!
ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಪ್ರಯುಕ್ತ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಿಂದ ಪವಿತ್ರ ಮೃತ್ತಿಕೆಯನ್ನು ನಾಲ್ವರು ಸಚಿವರು ಸಂಗ್ರಹಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಪ್ರಯುಕ್ತ ಇಂದು ಮಣ್ಣು ಸಂಗ್ರಹ ಮಾಡಲಾಗಿದೆ. ಸಚಿವರಾದ ಅಶ್ವತ್ಥನಾರಾಯಣ, ಅಶೋಕ, ಅರಗ ಜ್ಣಾನೇಂದ್ರ, ನಾರಾಯಣಗೌಡ ಹೆಲಿಕಾಪ್ಟರ್ ಮೂಲಕ ಉತ್ತರ ಕರ್ನಾಟಕ ಪ್ರಮುಖ ಹಾಗೂ ಪವಿತ್ರ ಸ್ಥಳಗಳಿಂದ ಮಣ್ಣು ಸಂಗ್ರಹಿಸಿದರು. ಇದಕ್ಕೂ ಮೊದಲು ಹಂಪಿ, ಕೂಡಲಸಂಗಮ ನಂತರ ಕಿತ್ತೂರು ಸೇರಿದಂತೆ ಮೂರು ಕಡೆ ಮಣ್ಣು ಸಂಗ್ರಹಿಸಲಾಗಿತ್ತು.
Add Asianetnews Kannada as a Preferred Source
