ಡಿಕೆಶಿ ಕುಟುಂಬ ಚಾಪೆ ಕೆಳಗೆ ತೂರಿದ್ರೆ, ರಂಗೋಲಿ ಕೆಳಗೆ ತೂರಿದ ಇಡಿ..!

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್​ ರದ್ದು ಕೋರಿ ಡಿಕೆಶಿ​​ ತಾಯಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ ನವೆಂಬರ್​ 7ಕ್ಕೆ ಮೂಂದೂಡಿದೆ.ಇದರ ಬೆನ್ನಲ್ಲೇ ಇಡಿ ರಂಗೋಲಿ ಕೆಳಗೆ ತೂರಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ನ.04): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್​ ರದ್ದು ಕೋರಿ ಡಿಕೆ ಶಿವಕುಮಾರ್​​ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ ನವೆಂಬರ್​ 7ಕ್ಕೆ ಮೂಂದೂಡಿದೆ.

Add Asianetnews Kannada as a Preferred SourcegooglePreferred

 ಇಂದು (ಸೋಮವಾರ) ವಾದ-ಪ್ರತಿವಾದ ಆಲಿಸಲಿದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ. ಈಗಾಗಲೇ ಹೈಕೋರ್ಟ್​ ನಾಲ್ಕು ಬಾರಿ ಅರ್ಜಿ ವಿಚಾರಣೆ ಮುಂದೂಡಿದೆ. 

ಸೋಮವಾರವೂ ಸಹ ನಡೆದ ವಿಚಾರಣೆಯನ್ನು ಕೂಡ ನ.7ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ಇಡಿ ಹೊಸ ಸಮನ್ಸ್ ನೀಡಿ ಡಿಕೆಶಿ ಕುಟುಂಬಕ್ಕೆ ಶಾಕ್ ನೀಡಿದೆ. ಹಾಗಾದ್ರೆ ಡಿಕೆಶಿ ಕುಟುಂಬವನ್ನು ಯಾವಾಗ ಬರಲು ಹೇಳಿದೆ..? ಎನ್ನುವ ಮಾಹಿತಿ ವಿಡಿಯೋನಲ್ಲಿ ನೋಡಿ.

Related Video