Asianet Suvarna News Asianet Suvarna News

ಇಲ್ಯಾರು ಸತ್ಯಹರಿಶ್ಚಂದ್ರರು ಅಲ್ರೀ, ಅವೆಲ್ಲಾ ಮನುಷ್ಯ ಸಹಜ : ಎಚ್‌ಡಿಕೆ

ಆರೋಗ್ಯ ಸಚಿವ ಸುಧಾಕರ್ ಏಕಪತ್ನಿ ವ್ರತಸ್ಥ ಚಾಲೆಂಜ್‌ಗೆ ಎಚ್‌ಡಿ ಕುಮಾರಸ್ವಾಮಿ ಸಖತ್ತಾಗೇ ಕೌಂಟರ್ ಕೊಟ್ಟಿದ್ದಾರೆ. 

ಬೆಂಗಳೂರು (ಮಾ. 24): ಆರೋಗ್ಯ ಸಚಿವ ಸುಧಾಕರ್ ಏಕಪತ್ನಿ ವ್ರತಸ್ಥ ಚಾಲೆಂಜ್‌ಗೆ ಎಚ್‌ಡಿ ಕುಮಾರಸ್ವಾಮಿ ಸಖತ್ತಾಗೇ ಕೌಂಟರ್ ಕೊಟ್ಟಿದ್ದಾರೆ. 

'ನೀವು ಕೋರ್ಟ್‌ಗೆ ಹೋಗಿ ಸ್ಟೇ ತರದೇ ಹೋಗಿದ್ರೆ, ಈ ಪರಿಸ್ಥಿತಿ ಬರ್ತಿತ್ತಾ..? ನೀವೇ ಸಮಸ್ಯೆ ಹುಟ್ಟು ಹಾಕಿ ಬೇರೆಯವರ ಬಗ್ಗೆ ಕೆಸರೆರಚಾಟ ಮಾಡ್ತಾ ಇದೀರಿ, ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಸಹಜವಾದ ಪ್ರಕ್ರಿಯೆ ಇರುತ್ತೆ.  ಇದನ್ನ ಬೀದಿಯಲ್ಲಿ ರಾಡಿ ಎರಚಿಕೊಂಡು ಹೋಗೋದು ಅಗತ್ಯ ಇದೆಯೇನ್ರಿ..? ಯಾರೂ ಸತ್ಯಹರಿಶ್ವಂದ್ರ ಅಲ್ಲ ಇಲ್ಲಿ, ಎಲ್ಲರ ಮನೆ ದೋಸೆ ತೂತು' ಎಂದಿದ್ಧಾರೆ. 

ಯಾರೇನೇ ಹೇಳಲಿ ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ; ಡಿಕೆಶಿ ಕೌಂಟರ್..!