
ಡಿಕೆ ಶಿವಕುಮಾರ್ ಒಳಗಿಂದ ಮೊಳಗಿದ ಹಿಂದುತ್ವ, ತಳಮಳ ಶುರು
ಸಿದ್ದರಾಮಯ್ಯ ಅಹಿಂದ ಅಸ್ತ್ರಕ್ಕೆ ಡಿಕೆಶಿ ಹಿಂದುತ್ವ ಪ್ರತ್ಯಾಸ್ತ್ರ ಹೂಡಿದ್ರಾ? ಡಿಕೆ ಶಿವಕುಮಾರ್ ಹಿಂದುತ್ವದ ನಡೆಗೆ ಬಿಡೆಪಿ ನಾಯಕರ ಪ್ರತಿಕ್ರಿಯೆ ಏನು? ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಈಶಾ ಫೌಂಡೇಶನ್ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಸಿಎಂ ಉಪಮುಖ್ಯಮಂತ್ರಿ ಪಾಲ್ಗೊಂಡ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆ ಆಗಿದೆ. ಚರ್ಚೆಗಳು ಜೋರಾಗಿದೆ. ಡಿಕೆ ಶಿವಕುಮಾರ್ ಹಿಂದುತ್ವದ ನಡೆ ಹಾಗೂ ಮಾತುಗಳು ಕಾಂಗ್ರೆಸ್ನ ಕೆಲವರಲ್ಲಿ ತಳಮಳ ಸೃಷ್ಟಿಸಿದೆ.ಈಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಮಹಾ ಶಿವರಾತ್ರಿ ಬಳಿಕ ಟ್ವೀಟ್ ಮಾಡಿರುವ ಶಿವಕುಮಾರ್, ತಮ್ಮ ಹೆಸರಿನ ಹಿಂದಿನ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟಿದ್ದಾರೆ.