Asianet Suvarna News Asianet Suvarna News

ಇಂದಿನಿಂದಲೇ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ..!

ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೆ ಬರಲಿದೆ. ಹೀಗಾಗಿ ಬರೋಬ್ಬರಿ 33 ಗಂಟೆಗಳವರೆಗೆ ರಾಜ್ಯ ಸಂಪೂರ್ಣ ಸ್ತಬ್ಧವಾಗಿರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನ ಸಂಚಾರಕ್ಕೆ ಇಂದು ಸಂಜೆಯಿಂದಲೇ ಬ್ರೇಕ್ ಬೀಳಲಿದೆ. 

ಬೆಂಗಳೂರು(ಜು.04): ಕೊರೋನಾ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮತ್ತೆ ವಾರಾಂತ್ಯದ ಲಾಕ್‌ಡೌನ್‌ಗೆ ಮೊರೆಹೋಗಿದ್ದು ಇಂದು (ಶನಿವಾರ) ಸಂಜೆಯಿಂದಲೇ ಕರ್ಫ್ಯೂ ಜಾರಿಗೆ ಬರಲಿದೆ. ಶನಿವಾರ ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗ್ಗೆ 4 ಗಂಟೆವರೆಗೆ ರಾಜ್ಯಾದ್ಯಂತ ಕರ್ಪ್ಯೂ ಜಾರಿಯಲ್ಲಿರಲಿದೆ.

ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೆ ಬರಲಿದೆ. ಹೀಗಾಗಿ ಬರೋಬ್ಬರಿ 33 ಗಂಟೆಗಳವರೆಗೆ ರಾಜ್ಯ ಸಂಪೂರ್ಣ ಸ್ತಬ್ಧವಾಗಿರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನ ಸಂಚಾರಕ್ಕೆ ಇಂದು ಸಂಜೆಯಿಂದಲೇ ಬ್ರೇಕ್ ಬೀಳಲಿದೆ. 

ಕೊರೋನಾ ವೈರಸ್ ಲಸಿಕೆ ಬೆಳಗಾವಿ ಆಸ್ಪತ್ರೆಯಲ್ಲಿ ಪ್ರಯೋಗ..!

ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಕೇಸ್ ದಾಖಲಿಸಲು ಸಜ್ಜಾಗಿದ್ದಾರೆ. ಕೊರೋನಾದಿಂದಾಗಿ ಬಚಾವಾಗಬೇಕೆಂದರೆ ಆದಷ್ಟು ಮನೆಯಲ್ಲೇ ಇರುವುದು ಒಳ್ಳೆಯದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories