Asianet Suvarna News Asianet Suvarna News

ತಮ್ಮ ಕಚೇರಿಯಲ್ಲೇ ಗಣಪತಿ ಕೂಡಿಸಿ ಪೂಜೆ ಮಾಡಿ ಮಂತ್ರ ಪಠಿಸಿದ ಶಾಸಕ ಜಮೀರ್

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಕಚೇರಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್.05):  ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಕಚೇರಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿ ಅಚ್ಚರಿ ಮೂಡಿಸಿದ್ದಾರೆ.

ಚಾಮರಾಜಪೇಟೆಯಲ್ಲಿ ಗಣೇಶ ಪ್ರತಿಷ್ಠಾಪನೆ: ಹಿಂದೂ ಹಬ್ಬ ಮಾಡದ ಜಮೀರ್ ಈ ಬಾರಿ ಗಣೇಶೋತ್ಸವ ಆಚರಿಸ್ತಿರೋದ್ಯಾಕೆ?

ಹೌದು...ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದ ಬೆನ್ನಲ್ಲೇ ಜಮೀರ್ ತಮ್ಮ ಕಚೇರಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಪ್ರಸಾದ ವಿತರಣೆ ಮಾಡಿದರು. ಗಣೇಶ ಪ್ರತಿಷ್ಠಾಪನೆ ಪೂಜೆ ಎಲ್ಲ ಜವಾಬ್ದಾರಿಯನ್ನು ದೊಡ್ಡ ಗಣೇಶ ‌ಪ್ರೋಹಿತರಿಗೆ ವಹಿಸಿದ್ದಾರೆ.ಈ ಮೂಲಕ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹೋರಾಟ ಮಾಡಿದವರಿಗೆ ಜಮೀರ್ ಟಾಂಗ್ ಕೊಟ್ರಾ?

Video Top Stories