ಸಿಪಿ ಯೋಗೇಶ್ವರ್ ವಿರುದ್ದ ಗೆದ್ದು ಬೀಗ್ತಾರ ನಿಖಿಲ್ ಕುಮಾರಸ್ವಾಮಿ? ಚನ್ನಪಟ್ಟಣದ ಚದುರಂಗ!

ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಘೋಷಿಸಿದ ಬಿಎಸ್‌ವೈ, ಶಿಗ್ಗಾಂವಿಯಲ್ಲಿ 6ನೇ ಬಾರಿ ಮುಸ್ಲಿಮ್ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್, ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ವಿರುದ್ಧ ಸಿದ್ದರಾಮಯ್ಯ ಮೇಲ್ಮನವಿ, ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಯ ಸೀಟು ಹಂಚಿಕೆ, ಸರ್ವರಿಗೆ ಸಮಪಾಲು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Oct 24, 2024, 11:51 PM IST | Last Updated Oct 24, 2024, 11:53 PM IST

ಕರ್ನಾಟಕ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ರಣಾಂಗಣ ರಂಗೇರಿದೆ. ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾದರೆ, ಇತ್ತ ಬಿಜಿಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಇಬ್ಬರು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಮೇಲ್ನೋಟಕ್ಕೆ ಇದು ನಿಖಿಲ್ ವರ್ಸಸ್ ಯೋಗೇಶ್ವರ್ ಆಗಿದ್ದರೂ ಇದರ ಹಿಂದೆ ಹೆಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖರ ಹೋರಾಟವಾಗಿದೆ. ಹೆಚ್‌ಡಿ ಕಮಾರಸ್ವಾಮಿಗೆ ಇದು ಪ್ರತಿಷ್ಠೆಯ ಕದನವಾಗಿದೆ.