
ಸಂಕಷ್ಟದಲ್ಲಿ ಸ್ವೀಟಿ; ರಾಧಿಕಾ ಕುಮಾರಸ್ವಾಮಿ ಆಸ್ತಿ ಸೀಜ್ ಮಾಡುತ್ತಾ ಸಿಸಿಬಿ..?
ಹಲವರಿಗೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ಯುವರಾಜ್, ಆ ಹಣವನ್ನು ರಾಧಿಕಾಗೆ ವರ್ಗಾಯಿಸಿದ್ದ ಎನ್ನಲಾಗಿದೆ. ಹಾಗಾಗಿ ಸಿಸಿಬಿ ರಾಧಿಕಾ ಅಕೌಂಟನ್ನು ಸೀಜ್ ಮಾಡಲಿದೆ. ಒಂದು ವೇಲೆ ಖರ್ಚು ಮಾಡಿದ್ದರೂ ಅದನ್ನು ವಸೂಲಿ ಮಾಡಲಿದೆ ಸಿಸಿಬಿ.
ಬೆಂಗಳೂರು (ಜ. 08): ವಂಚಕ ಯುವರಾಜ್ ಜತೆ ಹಣಕಾಸು ವ್ಯವಹಾರ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಕರಣ ಸಂಬಂಧ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನೋಟಿಸ್ ನೀಡಿದೆ. ಜೊತೆಗೆ ರಾಧಿಕಾಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಹಲವರಿಗೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ಯುವರಾಜ್, ಆ ಹಣವನ್ನು ರಾಧಿಕಾಗೆ ವರ್ಗಾಯಿಸಿದ್ದ ಎನ್ನಲಾಗಿದೆ. ಹಾಗಾಗಿ ಸಿಸಿಬಿ ರಾಧಿಕಾ ಅಕೌಂಟನ್ನು ಸೀಜ್ ಮಾಡಲಿದೆ. ಒಂದು ವೇಲೆ ಖರ್ಚು ಮಾಡಿದ್ದರೂ ಅದನ್ನು ವಸೂಲಿ ಮಾಡಲಿದೆ ಸಿಸಿಬಿ. ದಾಖಲೆಗಳ ಪ್ರಕಾರ 1 ಕೋಟಿ 25 ಲಕ್ಷ ಹಣ ವಾಪಸ್ ಬರಬೇಕಾಗಿದೆ.
Add Asianetnews Kannada as a Preferred Source

ರಾಧಿಕಾಗೆ ಪೊಲೀಸ್ ಬುಲಾವ್, ವಿಚಾರಣೆಗೆ ಬರ್ತಾರಾ..? ಗೈರಾಗ್ತಾರಾ..?