Asianet Suvarna News Asianet Suvarna News

'ಅನುಭವ ಮಂಟಪ' ಕ್ಕೆ ಸಿಎಂ ಶಿಲಾನ್ಯಾಸ, ಹೀಗಿರಲಿದೆ ವಿಶೇಷ..!

ಬಸವ ಭಕ್ತರ ಬಹುದಿನದ ಕನಸು ನನಸಾಗುವ ಸಮಯ ಬಂದಿದೆ. ಬಸವಕಲ್ಯಾಣದಲ್ಲಿ  'ನೂತನ ಅನುಭವ ಮಂಟಪ'ಕ್ಕೆ ಸಿಎಂ ಶಿಲಾನ್ಯಾಸ ನೆರವೇರಿಸಿದ್ದಾರೆ. 

ಬೆಂಗಳೂರು (ಜ. 06): ಬಸವ ಭಕ್ತರ ಬಹುದಿನದ ಕನಸು ನನಸಾಗುವ ಸಮಯ ಬಂದಿದೆ. ಬಸವಕಲ್ಯಾಣದಲ್ಲಿ  'ನೂತನ ಅನುಭವ ಮಂಟಪ'ಕ್ಕೆ ಸಿಎಂ ಶಿಲಾನ್ಯಾಸ ನೆರವೇರಿಸಿದ್ದಾರೆ. 

ಬಸವಕಲ್ಯಾಣದ ತ್ರಿಪುರಾಂತ ಕೆರೆ ದಂಡೆಯಲ್ಲಿರುವ 72 ಎಕರೆಯಲ್ಲಿನ 7.5 ಎಕರೆಯಲ್ಲಿ ಅನುಭವ ಮಂಟಪ ನಿರ್ಮಾಣಗೊಳ್ಳಲಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹವಾ ನಿಯಂತ್ರಣ, ಬೃಹತ್ ದಾಸೋಹ ಭವನ, ಟೆರಸ್ ಗಾರ್ಡನ್, ಬಯಲು ರಂಗಮಂದಿರ, ಐತಿಹಾಸಿಕ ಹಾಗೂ ಆಧುನಿಕ ಪರಿಕಲ್ಪನೆಗಳ ಸಂಯೋಜನೆಯಾಗಿರಲಿದೆ.