
ನಾನು ಕೊಟ್ಟ ದೂರು FIR ಆಗಿಲ್ಲ, ಹೆಬ್ಬಾಳ್ಕರ್ ದೂರಿನ ಬೆನ್ನಲ್ಲೇ ಬಂಧನ, ಇದು ಹೇಗೆ ಸಾಧ್ಯ, ಸಿಟಿ ರವಿ ಪ್ರಶ್ನೆ!
ಸತ್ಯಕ್ಕೆ ಜಯವಾಗಿದೆ ಎಂದು ಸಿಟಿ ರವಿ ಜಾಮೀನು ಸಿಕ್ಕ ಬೆನ್ನಲ್ಲೇ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಕ್ಷ್ಯವೇ ಇಲ್ಲದೆ ಬಂಧಿಸಿದ ಪೊಲೀಸರು, ಇದು ಹೇಗೆ? ಸಿಟಿ ರವಿ ಹೇಳಿದ್ದೇನು?
ಬೆಳಗಾವಿ(ಡಿ.20) ಬಿಜೆಪಿ ನಾಯಕ ಸಿಟಿ ರವಿ ಬಂಧನ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋ ಆರೋಪದಡಿ ಸಿಟಿ ರವಿ ಬಂಧಿಸಲಾಗಿತ್ತು. ಆದರೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಿಟಿ ರವಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಯಾವುದೇ ನೋಟಿಸ್ ನೀಡಿದ ಪೊಲೀಸರು ಬಂಧಿಸಿದ್ದಾರೆ. ಸುವರ್ಣ ಸೌಧದಲ್ಲಿ ಬಂಧಿಸಿದ್ದಾರೆ. ಸಭಾಪತಿಗಳ ಅನುಮತಿ ಅಗತ್ಯವಿದೆ. ಆದರೆ ಇದ್ಯಾವುದನ್ನು ಪೊಲೀಸರು ಪಾಲಿಸಿಲ್ಲ ಎಂದಿದ್ದಾರೆ.
Add Asianetnews Kannada as a Preferred Source
