Asianet Suvarna News Asianet Suvarna News

BIG 3 Impact: ಚಿತ್ರದುರ್ಗ ಪಾಪೇನಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿ ಪುನಾರಂಭ

ಏಷ್ಯಾನೆಟ್ ಸುವರ್ಣ ನ್ಯೂಸ್‌ ಜನಪ್ರಿಯ ಕಾರ್ಯಕ್ರಮ ಬಿಗ್‌3 ಯಲ್ಲಿ ಒಂದು ಸಮಸ್ಯೆಯನ್ನು ಪ್ರಸಾರ ಮಾಡಲಾಯಿತು ಅಂದರೆ ಅದಕ್ಕೆ ಪರಿಹಾರ ಸಿಗುವವರೆಗೂ ಬಿಡುವುದಿಲ್ಲ. ಇದನ್ನೂ ಸಾಕಷ್ಟು ಸಲ ನಿರೂಪಿಸಿದೆ. 

ಬೆಂಗಳೂರು (ಜೂ. 20): ಏಷ್ಯಾನೆಟ್ ಸುವರ್ಣ ನ್ಯೂಸ್‌ ಜನಪ್ರಿಯ ಕಾರ್ಯಕ್ರಮ ಬಿಗ್‌3 (BIG3) ಯಲ್ಲಿ ಒಂದು ಸಮಸ್ಯೆಯನ್ನು ಪ್ರಸಾರ ಮಾಡಲಾಯಿತು ಅಂದರೆ ಅದಕ್ಕೆ ಪರಿಹಾರ ಸಿಗುವವರೆಗೂ ಬಿಡುವುದಿಲ್ಲ. ಇದನ್ನೂ ಸಾಕಷ್ಟು ಸಲ ನಿರೂಪಿಸಿದೆ. 

ಚಿತ್ರದುರ್ಗ: ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ, ಮರದ ಕೆಳಗೆ ಮಕ್ಕಳಿಗೆ ಪಾಠ

ಚಿತ್ರದುರ್ಗದ (Chitradurga)  ಪಾಪೇನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಕೊಠಡಿ, ಕಟ್ಟಡ ಇಲ್ಲದೇ ಬಯಲಲ್ಲಿ ಪಾಠ ಕೇಳುತ್ತಿದ್ದರು. ನೂತನ ಕಟ್ಟಡವನ್ನು ಅರ್ಧಂಬರ್ಧ ಕಟ್ಟಿ ಕಂಟ್ರಾಕ್ಟರ್ ಕಾಣೆಯಾಗಿದ್ದ. ಈ ಬಗ್ಗೆ ಬಿಗ್ 3 ಸಂಬಂಧಪಟ್ಟ ಅಧಿಕಾರಿಗಳು, ಶಾಸಕರನ್ನು ತರಾಟೆಗೆ ತೆಗೆದುಕೊಂಡಿತ್ತು. ಕೂಡಲೇ ತಹಶೀಲ್ದಾರ್, ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರ್ಧಂಬರ್ಧ ಆಗಿದ್ದ ಕಟ್ಟಡ ಕಾಮಗಾರಿ ಈಗ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 

Video Top Stories