
CAA ಹೋರಾಟ: ಕಾಂಗ್ರೆಸ್ ಮುಖಂಡನಿಗೆ ಇಲ್ಲ ಮಣೆ, ಮುಜುಗರದಿಂದ ವಾಪಸು ಮನೆ!
- ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ NRC ವಿರುದ್ಧ ಬೃಹತ್ ಪ್ರತಿಭಟನೆ
- ಕಾಂಗ್ರೆಸ್ ನಾಯಕನಿಗೆ ನಿರ್ಬಂಧ ಹಾಕಿದ ಆಯೋಜಕರು
- ಮುಜುಗರದಿಂದ ವಾಪಾಸಾದ ಕಾಂಗ್ರೆಸ್ ಶಾಸಕ
ಬೆಂಗಳೂರು (ಡಿ.23): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ NRC ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಬಂದ ಮುಸ್ಲಿಮ್ ಸಮುದಾಯದ ಕಾಂಗ್ರೆಸ್ ನಾಯಕನಿಗೆ ಆಯೋಜಕರು ವೇದಿಕೆ ಬರದಂತೆ ತಡೆದಿರುವ ಘಟನೆ ನಡೆಯಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | ಎಲ್ಲಿದೆ ಬಂಧನ ಶಿಬಿರ?: ದೆಹಲಿಯಲ್ಲಿ ಪ್ರಧಾನಿ ಸಮರ!...
ಇದು ರಾಜಕೀಯೇತರ ಸಭೆ, ರಾಜಕೀಯ ಭಾಷಣಗಳು ಬೇಡ ಎಂದು ಆಯೋಜಕರು ಆ ಪ್ರಭಾವಿ ಶಾಸಕನಿಗೆ ಹೇಳಿದ್ದರೆನ್ನಲಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸಾದರು.