ನಮ್ಮನ್ನು ನಾವು ತಿದ್ದಿ ನಡೆಯೋಣ : ವಿನಯ್ ಗುರೂಜಿ ಕಿವಿಮಾತು

 ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರು ವಿವಿಯಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಕ್ಲೀನಥಾನ್ ನಡೆಸಲಾಯಿತು. ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಹಾಗೂ ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರು ವಿವಿಯ ಎನ್.ಎಸ್.ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ ಭಾಗಿಯಾಗಿ  ಸಸಿ ನೆಡುವುದರ ಮೂಲಕ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.  ಜಗತ್ತಿಗೆ ಅಹಿಂಸೆಯನ್ನ ತಿಳಿಸಿದ ಗಾಂಧಿಯವರ ಜನುಮದಿನ ಇಂದು. ಗಾಂಧಿಯವರು ವ್ಯಕ್ತಿ ಮಾತ್ರವಲ್ಲ ಶಕ್ತಿ. ಅವರ ಹುಟ್ಟಿಗೆ ಸಾವಿಲ್ಲ, ನಮಗೆಲ್ಲ ಪ್ರೆರಣಾಶಕ್ತಿ ಗಾಂಧಿ. ಹಳ್ಳಿ ಶುದ್ದಿಯಲ್ಲಿ ದೇಶದ ಶುದ್ದಿಕಾರ್ಯ ಇದ್ದು, ಸರ್ಕಾರ ಮಾಡಲಿ ಅಂತ ಹೇಳ್ತಿವಿ ನಾವು ಸರ್ಕಾರದ ಒಂದು ಭಾಗ ಅನ್ನೊದು ಮರೆತಿದ್ದೇವೆ.  ಪ್ರಕೃತಿ ಹಾಳು ಮಾಡುವುದರಲ್ಲಿ ಎಲ್ಲರ ಪಾತ್ರವಿದ್ದು, ಆದರೆ ಇದನ್ನು ತಿದ್ದಿ ನಡೆದು ನಮ್ಮ ಆಚರಣೆ ಇನ್ನೊಬ್ಬರಿಗೆ ಪಾಠವಾಗುವಂತೆ ಇರಬೇಕು ಎಂದು ಕಿವಿ ಮಾತು ಹೇಳಿದರು.  

Share this Video
  • FB
  • Linkdin
  • Whatsapp

ಬೆಂಗಳೂರು (ಅ.02):  ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರು ವಿವಿಯಲ್ಲಿ (Bengaluru VV) ಸ್ವಚ್ಚತಾ ಕಾರ್ಯ ಹಾಗೂ ಕ್ಲೀನಥಾನ್ ನಡೆಸಲಾಯಿತು. ಮಹಾತ್ಮಗಾಂಧಿ ಸೇವಾ ಟ್ರಸ್ಟ್ (Mahathma Gandhi Seva Trust) ಹಾಗೂ ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರು ವಿವಿಯ ಎನ್.ಎಸ್.ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ (Vinay Guruji) ಭಾಗಿಯಾಗಿ ಸಸಿ ನೆಡುವುದರ ಮೂಲಕ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.

Add Asianetnews Kannada as a Preferred SourcegooglePreferred

ಗವಿಮಠ ಶ್ರೀಗಳ ಪಾದುಕೆ ತಲೆ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ ವಿನಯ ಗುರೂಜಿ

ಜಗತ್ತಿಗೆ ಅಹಿಂಸೆಯನ್ನ ತಿಳಿಸಿದ ಗಾಂಧಿಯವರ ಜನುಮದಿನ ಇಂದು. ಗಾಂಧಿಯವರು ವ್ಯಕ್ತಿ ಮಾತ್ರವಲ್ಲ ಶಕ್ತಿ. ಅವರ ಹುಟ್ಟಿಗೆ ಸಾವಿಲ್ಲ, ನಮಗೆಲ್ಲ ಪ್ರೆರಣಾಶಕ್ತಿ ಗಾಂಧಿ. ಹಳ್ಳಿ ಶುದ್ದಿಯಲ್ಲಿ ದೇಶದ ಶುದ್ದಿಕಾರ್ಯ ಇದ್ದು, ಸರ್ಕಾರ ಮಾಡಲಿ ಅಂತ ಹೇಳ್ತಿವಿ ನಾವು ಸರ್ಕಾರದ ಒಂದು ಭಾಗ ಅನ್ನೊದು ಮರೆತಿದ್ದೇವೆ. ಪ್ರಕೃತಿ ಹಾಳು ಮಾಡುವುದರಲ್ಲಿ ಎಲ್ಲರ ಪಾತ್ರವಿದ್ದು, ಆದರೆ ಇದನ್ನು ತಿದ್ದಿ ನಡೆದು ನಮ್ಮ ಆಚರಣೆ ಇನ್ನೊಬ್ಬರಿಗೆ ಪಾಠವಾಗುವಂತೆ ಇರಬೇಕು ಎಂದು ಕಿವಿ ಮಾತು ಹೇಳಿದರು.

Related Video