Asianet Suvarna News Asianet Suvarna News

ಶಿರೂರು ಮಠಕ್ಕೆ ಬಾಲ ಸಂನ್ಯಾಸಿ ಉತ್ತರಾಧಿಕಾರಿ ನೇಮಕ ಅಪಸ್ವರ; ಸೋದೆ ಶ್ರೀಗಳಿಂದ ಸ್ಪಷ್ಟನೆ

ಶಿರೂರು ಮಠದ ಲಕ್ಷ್ಮೀವರ ತೀರ್ಥರು ನಿಧನದಿಂದ ಖಾಲಿಯಿದ್ದ, ಶೀರೂರು ಮಠಕ್ಕೆ ನೂತನ ಯತಿಯ ಘೋಷಣೆ ಮಾಡಲಾಗಿದೆ. ಧರ್ಮಸ್ಥಳ ಸಮೀಪದ ನಿಡ್ಲೆ ಮೂಲದ ಅನಿರುದ್ಧ್ ಸಂನ್ಯಾಸ ಸ್ವೀಕಾರಕ್ಕೆ ಸಿದ್ಧರಾಗಿದ್ದಾರೆ. 

ಉಡುಪಿ (ಏ. 23): ಶಿರೂರು ಮಠದ ಲಕ್ಷ್ಮೀವರ ತೀರ್ಥರು ನಿಧನದಿಂದ ಖಾಲಿಯಿದ್ದ, ಶೀರೂರು ಮಠಕ್ಕೆ ನೂತನ ಯತಿಯ ಘೋಷಣೆ ಮಾಡಲಾಗಿದೆ. ಧರ್ಮಸ್ಥಳ ಸಮೀಪದ ನಿಡ್ಲೆ ಮೂಲದ ಅನಿರುದ್ಧ್ ಸಂನ್ಯಾಸ ಸ್ವೀಕಾರಕ್ಕೆ ಸಿದ್ಧರಾಗಿದ್ದಾರೆ. ಇವರು ಎಸ್‌ಎಲ್‌ಸಿಸಿ ಪೂರೈಸಿದ್ದಾರೆ. ಈ ನಡುವೆ ಲಕ್ಷ್ಮೀವರ ತೀರ್ಥರ ಸಹೋದರರು ಅನಿರುದ್ಧ್ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಬಾಲ ಸಂನ್ಯಾಸ ನೀಡುವುದು ಸರಿಯಲ್ಲ, ವೇದ ಅಭ್ಯಾಸ ಪೂರೈಸಿದ 21 ವರ್ಷದ ವಟುವನ್ನು ನೇಮಿಸುವುದು ಸೂಕ್ತ ಎಂದಿದ್ದಾರೆ. ಸೋದೆ ಶ್ರೀಗಳು ಈ ಆಕ್ಷೇಪಕ್ಕೆ ಉತ್ತರ ನೀಡಿದ್ದಾರೆ. 
 

Video Top Stories