Asianet Suvarna News Asianet Suvarna News

ಇಂದು ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ವಿಧಾನಸೌಧ ಸುತ್ತಮುತ್ತ ಮಾರ್ಗ ಬದಲಾವಣೆ

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಹಿನ್ನೆಲೆ ವಿಧಾನಸೌಧ ಹಾಗೂ ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್ ಹೆಚ್ಚಾಗುವ‌ ಸಾಧ್ಯತೆಯಿದೆ.

ಇಂದು ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 20 ರಿಂದ 25 ಸಾವಿರ ಜನ ಸೇರುವ ಸಾಧ್ಯತೆ ಇದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಇನ್ನು ವಿಧಾನಸೌಧ ಹಾಗೂ ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್ ಹೆಚ್ಚಾಗಲಿದ್ದು, ಆದ್ದರಿಂದ ಪೊಲೀಸ್‌ ತಿಮ್ಮಯ್ಯ-ಕೆ.ಆರ್‌ ಸರ್ಕಲ್’ವರೆಗೆ ರಸ್ತೆ ಬಂದ್‌ ಮಾಡಲಾಗಿದೆ. ಇಂದು ರಾತ್ರಿ 10ಗಂಟೆಯವರೆಗೆ ಅಂಬೇಡ್ಕರ್ ರಸ್ತೆ , ಇನ್ಫೇಂಟ್ರಿ ರೋಡ್,‌ ಅರಮನೆ ರಸ್ತೆ, ಕಬ್ಬನ್‌ ಪಾರ್ಕ್, ರಾಜ ಭವನ ಕ್ವೀನ್ಸ್‌ ರೋಡ್‌, ಕನ್ನಿಂಗ್‌ ಹ್ಯಾಂ‌ ರಸ್ತೆಯ ಮಾರ್ಗ ಬದಲಾವಣೆ ಮಾಡಲಾಗಿದೆ.  

3 ವರ್ಷದ ಬಳಿಕ ಮುಂಬೈಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ; ತವರಿಗೆ ಮರಳಿದ ಸಂತಸದ ಕ್ಷಣ ಹೀಗಿತ್ತು