
ದರ್ಶನ್ ಪರ ಸುಮಲತಾ ಅಂಬರೀಷ್ ಯುದ್ಧ; ಡಿ ಬಾಸ್ ಫ್ಯಾನ್ಸ್ ಬಿಡ್ತಿದಾರೆ ಕೆಂಗಣ್ಣು!
ಸುಮಲತಾ ಅಂಬರೀಷ್ ಮತ್ತೆ ಮಾತಾಡಿದ್ದಾರೆ. ಅಥವಾ, ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದ್ದಾರೆ ಎನ್ನಬಹುದು. ಅದಕ್ಕೆ ಕಾರಣ ನಟ ದರ್ಶನ್. ಕೊಲೆ ಆರೋಪಿ ನಟ ದರ್ಶನ್ ಜೈಲಿನಲ್ಲಿದ್ದಾಗ ಒಮ್ಮೆಯೂ ಈ ಸುಮಮ್ಮ ನೋಡಲು ಹೋಗಲಿಲ್ಲ. ಈಗ..
ನಟ ದರ್ಶನ್ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಬೇಲ್ ಪಡೆದು ಸದ್ಯ ಜೈಲಿನಿಂದ ಆಚೆ ಇದ್ದಾರೆ. ದರ್ಶನ್ ಆರೋಗ್ಯದ ಪರಿಸ್ಥಿತಿ ಇತ್ತೀಚೆಗೆ ಅಯೋಮಯ ಎಂಬಂತಾಗಿದೆ. ನಟ ಧನ್ವೀರ್ ಹಾಗೂ ದರ್ಶನ್ ತಮ್ಮ ದಿನಕರ್ ತೂಗುದೀಪ ಜಾಮೀನಿಗೆ ಶ್ಯೂರಿಟಿ ಕೊಟ್ಟು ದರ್ಶನ್ ಅವರನ್ನು ಜೈಲಿನಿಂದ ಹೊರಗೆ ತಂದಿದ್ದಾರೆ. ಆದರೆ, ಈಗ ಸುಮಲತಾ ದರ್ಶನ್ ಪರ ಏನೇನೋ ಮಾತನಾಡಿದ್ದಾರೆ ನೋಡಿ..
Add Asianetnews Kannada as a Preferred Source

ಸುಮಲತಾ ಅಂಬರೀಷ್ ಮತ್ತೆ ಮಾತಾಡಿದ್ದಾರೆ. ಅಥವಾ, ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದ್ದಾರೆ ಎನ್ನಬಹುದು. ಅದಕ್ಕೆ ಕಾರಣ ನಟ ದರ್ಶನ್. ಕೊಲೆ ಆರೋಪಿ ನಟ ದರ್ಶನ್ ಜೈಲಿನಲ್ಲಿದ್ದಾಗ ಒಮ್ಮೆಯೂ ಈ ಸುಮಮ್ಮ ನೋಡಲು ಹೋಗಲಿಲ್ಲ. ಈಗ ಸತತವಾಗಿ ದಚ್ಚು ಪರ ಅಖಾಡಕ್ಕಿಳಿದಿದ್ದಾರೆ. ಸುಮಲತಾ ಹೇಳಿದ್ದೇನು ? ಇದಕ್ಕೆ ದರ್ಶನ್ ಭಕ್ತಗಣ ಎದುರುತ್ತರ ಕೊಟ್ಟಿದ್ದೇನು ? ಮದರ್ ಇಂಡಿಯಾ ಅಂಡ್ ಸನ್ ಮಧ್ಯೆ ಇರುವ ಕರುಳು ಕಿವುಚುವ ಕಥನ ನಿಮ್ಮ ಮುಂದೆ...