Asianet Suvarna News Asianet Suvarna News

ಅಪ್ಪು ಸಮಾಧಿಗೆ ಭೇಟಿ, ಬೆಂಗಳೂರಿಗೆ ಪಾದ ಯಾತ್ರೆ ಮಾಡಿದ ವಿಶೇಷ ಚೇತನ ಅಭಿಮಾನಿ

ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ರವಿಕುಮಾರ್ ಸಮಾಧಿ ದರ್ಶನ ಪಡೆಯಲು ಸುಮಾರು 500 ಕಿ.ಮೀ ಪ್ರಯಾಣ ಮಾಡಿದ್ದಾರೆ. ಅಪ್ಪು ಪೋಟೋ ಕೈಯಲ್ಲಿಡಿದುಕೊಂಡು ಪಾದಯಾತ್ರೆ ಹೊರಟ ಅಭಿಮಾನಿ ಪುನೀತ್ ಬದುಕಿದ್ದಾಗ ಭೇಟಿಯಾಗಲು ಆಗಿರಲಿಲ್ಲ. ಹಾಗಾಗಿ ಅವರ ಸಮಾಧಿಗೆ ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುತ್ತೇನೆ ಎಂದಿದ್ದಾರೆ ಆ ವ್ಯಕ್ತಿ.

ಯಾದಗಿರಿ(ಜ.14): ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆದಿದೆ. ಅಪ್ಪು ಸಮಾಧಿ ದರ್ಶನ ಪಡೆಯಲು ಯಾದಗಿರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಐಕೂರ್ ಗ್ರಾಮದ ವಿಶೇಷ ವಿಕಲಚೇತನ ರವಿಕುಮಾರ್ ನಿಂದ ಪಾದಯಾತ್ರೆ ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ರವಿಕುಮಾರ್ ಸಮಾಧಿ ದರ್ಶನ ಪಡೆಯಲು ಸುಮಾರು 500 ಕಿ.ಮೀ ಪ್ರಯಾಣ ಮಾಡಿದ್ದಾರೆ. ಅಪ್ಪು ಪೋಟೋ ಕೈಯಲ್ಲಿಡಿದುಕೊಂಡು ಪಾದಯಾತ್ರೆ ಹೊರಟ ಅಭಿಮಾನಿ ಪುನೀತ್ ಬದುಕಿದ್ದಾಗ ಭೇಟಿಯಾಗಲು ಆಗಿರಲಿಲ್ಲ. ಹಾಗಾಗಿ ಅವರ ಸಮಾಧಿಗೆ ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುತ್ತೇನೆ ಎಂದಿದ್ದಾರೆ ಆ ವ್ಯಕ್ತಿ.

ಅವರ ಆದರ್ಶ ಜೀವನ ನಮ್ಮೆಲ್ಲರಿಗೂ ಮಾದರಿ. ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ಮತ್ತು ಸಹಾಯ ಮಾಡುವ ಗುಣ ಮೆಚ್ಚುವಂತದ್ದು. ಅವರ ನೂರ್ಕಾಲ ಬಾಳಿ ಬದುಕಬೇಕಾಗಿತ್ತು. ಅವರ ಅಕಾಲಿಕ ಮರಣ ನನಗೆ ಬಹಳ ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ ರವಿಕುಮಾರ್.

Video Top Stories