ಕಲ್ಲು ಹೃದಯವನ್ನೂ ಕರಗಿಸಿದ ಸ್ಪಂದನಾ ಅಂತಿಮ ವಿಧಿ ವಿಧಾನ, ವಿಜಯ್ ಕುಟುಂಬಕ್ಕೆ ಸಾಂತ್ವನ!

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನು ನೆನಪು ಮಾತ್ರ, ಪುತ್ರನಿಂದ ಅಂತ್ಯಕ್ರಿಯೆ, ಬಾಕಿ ಬಿಲ್‌ಗಾಗಿ ಪ್ರತಿಭಟನೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಆರೋಪ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಕ್ರಿಯೆ ಇಂದು ನೇರವೇರಿದೆ. ಬ್ಯಾಂಕಾಕ್ ಪ್ರವಾಸದಲ್ಲಿ ಅಕಾಲಿಕ ನಿಧನಹೊಂದಿಗೆ ಸ್ಪಂದನಾ ವಿಜಯ ರಾಘವೇಂದ್ರ ಪಾರ್ಥೀವ ಶರೀರ ನಿನ್ನೆ ಬೆಂಗಳೂರಿಗೆ ಆಗಮಿಸಿತ್ತು. ಸಾರ್ವಜನಿಕ ದರ್ಶನದ ಬಳಿಕ ಇಂದು ಸಂಜೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೇರವೇರಿಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಮದುವೆ ಸೀರೆ ತೊಡಿಸಿ, ಕುಂಕುಮ ಇಟ್ಟು, ಬಳೆ ತೊಡಿಸಿದ ಅಂತಿಮ ವಿಧಿವಿಧಾನಗಳು ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು.ದುಃಖ ಮಡುವಿನಲ್ಲೂ ವಿಜಯ್ ರಾಘವೇಂದ್ರ ಪುತ್ರನನ್ನು ಸೈಂತಿಸಿದ್ದಾರೆ. ವಿಜಯ್ ರಾಘವೇಂದ್ರಗೆ ಗಣ್ಯರು ಸಾಂತ್ವನ ಹೇಳಿದ್ದಾರೆ.ಸ್ಪಂದನಾ ವಿಜಯ್ ರಾಘವೇಂದ್ರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕೋಡಿಮಠ ಶ್ರೀಗಳು ಇಂದು ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

Related Video