'ಪುನೀತ ಪರ್ವ'ಕ್ಕೆ ತಾರೆಗಳ ಸಮಾಗಮ: ಇಲ್ಲಿದೆ ಅಪ್ಪು ಬಳಗ!
ಅಪ್ಪು ಕನಸಿನ ‘ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಇದು ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರವಾಗಿದ್ದು, ಹಾಗಾಗಿ ಪುನೀತ ಪರ್ವ ಹೆಸರಿನಲ್ಲಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ.
ಅಕ್ಟೋಬರ್ 21 ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ 'ಪುನೀತ ಪರ್ವ' ನಡೆಯಲಿದ್ದು ಗಣ್ಯಾತಿಗಣ್ಯರು ಬರುತ್ತಿದ್ದಾರೆ. ಬಹುಭಾಷಾ ನಟ ಕಮಲ್ ಹಾಸನ್, ತಮಿಳು ನಟ ಸೂರ್ಯ, ತೆಲುಗು ಸ್ಟಾರ್ ನಂದಮುರಿ ಬಾಲಕೃಷ್ಣ ಸೇರಿ ಅನೇಕ ಸ್ಟಾರ್'ಗಳು ಅಪ್ಪುಗಾಗಿ ಬರಲಿದ್ದಾರೆ. ಗಂಧದಗುಡಿ ನೆಪದಲ್ಲಿ ನಡೆಯುತ್ತಿರೋ ಈ ಅದ್ದೂರಿ ಕಾರ್ಯಕ್ರಮ, ಇತಿಹಾಸದ ಪುಟದಲ್ಲಿ ಸೇರಬೇಕೆನ್ನುವ ಆಸೆ ಅಪ್ಪು ಬಳಗದ್ದಾಗಿದೆ.