
ನಟ ಸಂಚಾರಿ ವಿಜಯ್ ಬ್ರೈನ್ ಡೆಡ್; ಅಂಗಾಂಗ ದಾನದ ಬಳಿಕ ಕೊನೆಯುಸಿರು!
ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯವಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೆದುಳು ಹೊರತು ಪಡಿಸಿದರೆ ಸಂಚಾರಿ ಆರೋಗ್ಯ ಸ್ಥಿರವಾಗಿದೆ, ಎಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿದೆ. ಇಂದು ರಾತ್ರಿಯಿಂದ ಸಂಚಾರಿ ವಿಜಯ್ ಅಂಗಾಂಗ ದಾನ ನಡಯೆಲಿದೆ. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆಯಲಿದ್ದಾರೆ. ಸಂಚಾರಿ ನಾಟಕಗಳಿಂದ ಜನಪ್ರಿಯರಾಗಿ, ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಪ್ರತಿಭಾನ್ವಿತ ನಟನ ಅಂತಿಮ ಸಂಚಾರ ಅತ್ಯಂತ ನೋವಿನಿಂದ ಕೂಡಿದೆ.
ಬೆಂಗಳೂರು(ಜೂ.14): ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯವಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೆದುಳು ಹೊರತು ಪಡಿಸಿದರೆ ಸಂಚಾರಿ ಆರೋಗ್ಯ ಸ್ಥಿರವಾಗಿದೆ, ಎಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿದೆ. ಇಂದು ರಾತ್ರಿಯಿಂದ ಸಂಚಾರಿ ವಿಜಯ್ ಅಂಗಾಂಗ ದಾನ ನಡಯೆಲಿದೆ. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆಯಲಿದ್ದಾರೆ. ಸಂಚಾರಿ ನಾಟಕಗಳಿಂದ ಜನಪ್ರಿಯರಾಗಿ, ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಪ್ರತಿಭಾನ್ವಿತ ನಟನ ಅಂತಿಮ ಸಂಚಾರ ಅತ್ಯಂತ ನೋವಿನಿಂದ ಕೂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ