Asianet Suvarna News Asianet Suvarna News

ದೇವರು ಅವರಿಬ್ಬರಿಗೆ ವರ ಕೊಟ್ಟು, ಈಗ ಒಂದು ಕೊಂಡಿಯನ್ನು ಕಿತ್ತುಕೊಂಡಿದ್ದಾನೆ: ನಟ ಧರ್ಮ

ಅವರಿಬ್ಬರಿಗೂ ದೇವರು ಒಂದು ವರ ಕೊಟ್ಟಿದ್ದ. ಆದ್ರೆ ಈಗ ವರದಲ್ಲಿ ಒಂದು ಕೊಂಡಿಯನ್ನು ದೇವರು ಕಿತ್ತುಕೊಂಡಿದ್ದಾನೆ ಎಂದು ನಟ ಧರ್ಮ ಅವರು ಹೇಳಿದ್ದಾರೆ.
 

First Published Aug 8, 2023, 11:50 AM IST | Last Updated Aug 8, 2023, 11:50 AM IST

ಸ್ಯಾಂಡಲ್‌ವುಡ್‌ನ ಅಪರೂಪದ, ಅನುರೂಪದ ಜೋಡಿಯಾಗಿದ್ದ ವಿಜಯ್‌ ರಾಘವೇಂದ್ರ(Vijay raghavendra) ಹಾಗೂ ಸ್ಪಂದನಾರನ್ನು(spandana) ವಿಧಿ ಬೇರೆ ಮಾಡಿದೆ. ನಟ ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ ಬಗ್ಗೆ ನಟ ಧರ್ಮ(Actor dharma) ಅವರು ಮಾತನಾಡಿದ್ದಾರೆ. ಇವರು ವಿಜಯ್‌ ರಾಘವೇಂದ್ರ ಅವರ ಸ್ನೇಹಿತರಾಗಿದ್ದಾರೆ. ರಾಘವೇಂದ್ರ ನಗು ಮುಖದ ವ್ಯಕ್ತಿ. ಸ್ಪಂದನಾ ಸೆಟ್‌ನಲ್ಲಿ ತುಂಬಾ ನಗುತ್ತಾ ಇರುತ್ತಿದ್ದರು. ಅವರಿಬ್ಬರಿಗೂ ದೇವರು ಒಂದು ವರ ಕೊಟ್ಟಿದ್ದ. ಆದ್ರೆ ಈಗ ವರದಲ್ಲಿ ಒಂದು ಕೊಂಡಿಯನ್ನು ದೇವರು ಕಿತ್ತುಕೊಂಡಿದ್ದಾನೆ. ರಾಘು ಪ್ರತಿಯೊಂದು ಸಂದರ್ಶನದಲ್ಲಿ ತಮ್ಮ ಹೆಂಡತಿ ಬಗ್ಗೆ ಮಾತನಾಡದೇ ಇರುತ್ತಿರಲಿಲ್ಲ ಎಂದು ನಟ ಧರ್ಮ ಹೇಳಿದ್ದಾರೆ. ಸ್ಪಂದನಾ ಕುಟುಂಬದಲ್ಲಿ ನನಗೆ ಅವರ ಬ್ರದರ್‌ ತುಂಬಾ ಪರಿಚಯ. ಈ ಕುಟುಂಬಕ್ಕೆ ದೇವರು ಇಂತಹ ನೋವು ಕೊಡಬಾರದಿತ್ತು. ಅವನನ್ನು ಮಾತನಾಡಿಸುವ ಶಕ್ತಿ ನಮ್ಮಲ್ಲಿ ಇಲ್ಲ ಎಂದು ನಟ ಧರ್ಮ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಶಾಸಕರು ವರ್ಸಸ್ ಸಚಿವರ ಮುನಿಸು: ಎರಡನೇ ದಿನವೂ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್