
Gandhada Gudi ಅಪ್ಪು ದೇವತಾ ಮನುಷ್ಯ : ಗಂಧದ ಗುಡಿ ವೀಕ್ಷಿಸಿದ ಅಜಯ್ ರಾವ್
ಅಪ್ಪು ಕನಸಿನ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ನಟ ಅಜಯ್ ರಾವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಂಧದ ಗುಡಿಸಿನಿಮಾ ಭಾವುಕವಾಗುವ ವಿಷಯ ಹಾಗೂ ಸಂತೋಷವಾಗುವ ವಿಷಯ ಎರಡನ್ನು ಒಳಗೊಂಡಿದೆ. ಸಾಕಷ್ಟು ಒಳ್ಳೆಯ ಅಂಶಗಳು ಸಿನಿಮಾದಲ್ಲಿವೆ. ಕಾಡಿನ ಸಂರಕ್ಷಣೆಯ ಬಗ್ಗೆ, ಪ್ಲಾಸ್ಟಿಕ್ ಬಳಸದೆ ಇರುವುದರ ಬಗ್ಗೆ, ನೀರಿನ ಬಗ್ಗೆ , ಸರ್ಕಾರಿ ಶಾಲೆಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು. ಪುನೀತ್ ಅವರು ಪುನೀತ್ ಆಗಿನೇ ಕಾಣೋ ಹಬ್ಬ ಗಂಧದ ಗುಡಿ. ಈ ಸಿನಿಮಾ ದೊಡ್ಡ ಯಶಸ್ಸನ್ನು ಕಾಣಬೇಕು, ವರ್ಡ್ ರೆಕಾರ್ಡ್ ಆಗಬೇಕು. ಕೊನೆಯ ಒಂದು ಸೀನ್'ನಲ್ಲಿ ಅವರು ಕೈ ಮುಗಿತಾರೆ. ಅದು ತುಂಬಾ ಭಾವುಕವಾದ ಸೀನ್, ಅದು ವಿದಾಯ ಹೇಳುವಂತ ಒಂದು ಸಂದರ್ಭ ಎನಿಸುತ್ತದೆ. ಅವರು ಒಬ್ಬರು ದೇವತಾ ಮನುಷ್ಯ. ವಿ ಲವ್ ಯು ಅಪ್ಪು ಸರ್, ಮಿಸ್ ಯು ಎಂದು ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ