ಡಾ ರಾಜ್‌ಕುಮಾರ್​ ಕಿಡ್ನಾಪ್​ ಆಗಿ ಇಂದಿಗೆ 25 ವರ್ಷ; 108 ದಿನಗಳು ವೀರಪ್ಪನ್ ವಶದಲ್ಲಿದ್ದ ವರನಟ!

ಜುಲೈ 30, 2000 ರಂದು, ಆಗಷ್ಟೇ ಊಟ ಮಾಡಿ ವಿಶ್ರಮಿಸುತ್ತಿದ್ದ ಡಾ.ರಾಜಕುಮಾರ್ ಮನೆಗೆ ಕಾಡುಗಳ್ಳ ವೀರಪ್ಪನ್​ ಎಂಟ್ರಿಕೊಟ್ಟಿದ್ದ.. ಸಹಚರರೊಂದಿಗೆ ಬಂದಿದ್ದ ವೀರಪ್ಪನ್​​ನನ್ನು ನೋಡಿ ಇಡೀ ಕುಟುಂಬವೇ ಬೆಚ್ಚಿಬಿದ್ದಿತ್ತು..ಡಾ. ರಾಜ್​ರನ್ನು ಕರೆದೊಯ್ದಿದ್ದು, ದಟ್ಟಾರಣ್ಯ ಪ್ರದೇಶಕ್ಕೆ…

Share this Video
  • FB
  • Linkdin
  • Whatsapp

ಡಾ.ರಾಜ್​ಕುಮಾರ್ (Dr Rajkumar) ಅಪಹರಣ ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದು.. ವರನಟ ರಾಜಕುಮಾರ್​​ ಅಪಹರಣ (Dr Rajkumar Kidnap) ಆಗಿ ಇಂದಿಗೆ 25 ವರ್ಷವಾದ್ರೂ ಕುಟುಂಬಸ್ಥರಿಗೆ ಮರೆಯಲಾಗದ ಒಂದು ಕಹಿಘಟನೆಯಾಗಿ ಉಳಿದಿದೆ..

ಜುಲೈ 30, 2000 ರಂದು, ಆಗಷ್ಟೇ ಊಟ ಮಾಡಿ ವಿಶ್ರಮಿಸುತ್ತಿದ್ದ ಡಾ.ರಾಜಕುಮಾರ್ ಮನೆಗೆ ಕಾಡುಗಳ್ಳ ವೀರಪ್ಪನ್​ ಎಂಟ್ರಿಕೊಟ್ಟಿದ್ದ.. ಸಹಚರರೊಂದಿಗೆ ಬಂದಿದ್ದ ವೀರಪ್ಪನ್​​ನನ್ನು ನೋಡಿ ಇಡೀ ಕುಟುಂಬವೇ ಬೆಚ್ಚಿಬಿದ್ದಿತ್ತು..ಡಾ. ರಾಜ್​ರನ್ನು ಕರೆದೊಯ್ದಿದ್ದು, ದಟ್ಟಾರಣ್ಯ ಪ್ರದೇಶಕ್ಕೆ.

ರಾಜಕುಮಾರ್​​ ಅಪಹರಣದ ಬಗ್ಗೆ ಪಾರ್ವತಮ್ಮ ರಾಜಕುಮಾರ್​​ ಅಂದಿನ ಸಿಎಂ ಎಸ್​​.ಎಂ ಕೃಷ್ಣಪ್ಪಗೆ ದೂರು ನೀಡಿದ್ರು.. ಅಂದಿನ ಸರ್ಕಾರ ರಾಜಕುಮಾರ್​ ಬಿಡಿಸಿಕೊಂಡು ಬರಲು ಹರಸಾಹವೇ ಪಟ್ಟಿತ್ತು..ತನ್ನ ಬೇಡಿಕೆಗಾಗಿ ರಾಜ್​ಕುಮಾರ್​ರನ್ನು ಒತ್ತೆಯಾಳಾಗಿ ವೀರಪ್ಪನ್ ಇರಿಸಿಕೊಂಡಿದ್ದ.. 108 ದಿನದ ಬಳಿಕ ಕಾಡುಕಳ್ಳ ವೀರಪ್ಪನ್, ರಾಜಕುಮಾರ್​ರನ್ನು ಬಿಡುಗಡೆ ಮಾಡಿದ್ದ

ಇಂದಿಗೂ ಗಾಜನೂರಿನ ಜನ ಈ ಕರಾಳ ದಿನವನ್ನು ನೆನಪಿಸಿಕೊಳ್ಳುತ್ತಾರೆ. ವೀರಪ್ಪನ್​ಗೆ ಹಿಡಿಶಾಪ ಹಾಕ್ತಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video