
ಅಥಣಿ ಬಿಜೆಪಿ ಟಿಕೆಟ್ ಹಂಗಾಮ, ಶಾ ಪಾಠಕ್ಕೆ ಇಲ್ಲ ಬೆಲೆ...!
ಬಿಜೆಪಿ ಹೈಕಮಾಂಡ್ಗೆ ಬೆಳಗಾವಿ ಭಿನ್ನಮತ ಟೆನ್ಷನ್ ಆರಂಭವಾಗಿದ್ದು, ಅಮಿತ್ ಶಾ ಪಾಠ ಮಾಡಿದ್ರೂ ನಾಯಕರು ಡೋಂಟ್ಕೇರ್ ಎನ್ನುತ್ತಿದ್ದಾರೆ.
ಬಿಜೆಪಿ ಹೈಕಮಾಂಡ್ಗೆ ಬೆಳಗಾವಿ ಭಿನ್ನಮತ ಟೆನ್ಷನ್ ಆರಂಭವಾಗಿದ್ದು, ಅಮಿತ್ ಶಾ ಪಾಠ ಮಾಡಿದ್ರೂ ನಾಯಕರು ಡೋಂಟ್ಕೇರ್ ಎನ್ನುತ್ತಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನ ನಾಯಕರ ಮಧ್ಯೆ ಫೈಟ್ ಆರಂಭವಾಗಿದೆ. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತು ಸವದಿ ನಡುವೆ ಟಿಕೆಟ್ ಫೈಟ್ ಜೋರಾಗಿದ್ದು, ಲಕ್ಷ್ಮಣ ಸವದಿ ಬಳಿಕ ಪುತ್ರ ಚಿದಾನಂದ ಸವದಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಜಾರಕಿಹೊಳಿ ಕುಮಟಳ್ಳಿಗೆ ಟಿಕೆಟ್ ಕೊಡದಿದ್ರೆ ನಾನು ಸ್ಪರ್ಧಿಸಲ್ಲ ಎಂದಿದ್ದು,ಇದಕ್ಕೆ ಸವದಿ ಮಗ ತಿರುಗೇಟು ನೀಡಿದ್ದಾರೆ. ರಾಜ್ಯ ನಾಯಕರಿಗೆ ಸಂದೇಶ ಕೊಡಲು ನಾವು ತಯಾರಿದ್ದೇವೆ ಚಿಕ್ಕೋಡಿಯಲ್ಲಿ ಸವದಿ ಪುತ್ರ ಚಿದನಂದ ಸವದಿ ಖಡಕ್ ಮಾತಾಡಿದ್ದಾರೆ.
Add Asianetnews Kannada as a Preferred Source
