ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ : ಸುನಿಲ್‌ ಕುಮಾರ್‌ ಆರೋಪ

ಪ್ರಮೋದ್ ಮುತಾಲಿಕ್‌ ಹಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದುಗಳ ಹತ್ಯೆ ಮಾಡಿಸಿದ್ರು. ಟೈಗರ್ ಗ್ಯಾಂಗ್ ಹೆಸರಲ್ಲಿ ಎಷ್ಟು ಹತ್ಯೆ ಮಾಡಿಸಿದ್ರಿ, ಈ ಬಗ್ಗೆ ದಾಖಲೆ ಕೊಡಬೇಕಾ ಎಂದು ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದಾರೆ.

Share this Video
  • FB
  • Linkdin
  • Whatsapp

ಉಡುಪಿ: ಗೆದ್ದ ಖುಷಿಯಲ್ಲಿ ಆಕ್ರೋಶ ಹೊರಹಾಕಿರುವ ಸುನಿಲ್ ಕುಮಾರ್‌, ಪ್ರಮೋದ್ ಮುತಾಲಿಕ್ ವಿರದ್ಧ ನೇರ ಕಾಳಗಕ್ಕಿಳಿದ್ದಾರೆ. ನಿನ್ನೆ ನಡೆದ ಅಭಿನಂದನಾ ಸಭೆಯಲ್ಲಿ ಸುನಿಲ್ ಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ. ಪ್ರತಿಸ್ಪರ್ಧಿಗಳ ವಿರುದ್ದ ನೇರ ಡೀಲ್ ಆರೋಪವನ್ನು ಸುನಿಲ್‌ ಕುಮಾರ್‌ ಮಾಡಿದ್ದಾರೆ. ನೈಜ ಹಿಂದುತ್ವ ಅಂತಾ ಹೇಳಿ ಡೀಲ್ ಮಾಸ್ಟರ್ ಬಂದ್ರು, ಮೊದಲ ಬಾರಿಗೆ ಪ್ರಮೋದ್ ಮುತಾಲಿಕ್ ಹೆಸರು ಬಳಸುತ್ತಿದ್ದೇನೆ. ಅವರು ಯಾಕೆ ಇಲ್ಲಿಗೆ ಬಂದ್ರು?, ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಿ. ನಾನು ಹತ್ತು ಬಾರಿ ಹೇಳುತ್ತಿದ್ದೇನೆ ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್. ಹಣ ಸಿಗುತ್ತೆ ಅಂದ್ರೆ ಏನು ಬೇಕಾದರೂ ಮಾಡಬಲ್ಲರು ಎಂದು ಸುನಿಲ್‌ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಸುನಿಲ್‌ ಕುಮಾರ್‌ ಆರೋಪಕ್ಕೆ ಪ್ರಮೋದ್‌ ಮುತಾಲಿಕ್‌ ತಿರುಗೇಟು ನೀಡಿದ್ದು, ಕಾರ್ಕಳ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ತೆಂಗಿನ ಕಾಯಿ ಹಿಡಿದು ನ್ಯಾಯ ನೀಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.ನಾನು ಕಾಂಗ್ರೆಸ್ ನಿಂದ ಹಣ ಪಡೆದಿಲ್ಲ,ದುಡ್ಡು ಪಡೆದಿದ್ದರೆ ಶಿಕ್ಷೆ ಆಗಲಿ. ಆರೋಪ ಮಾಡಿದವರು ನನ್ನ ಮೇಲಿನ ಆರೋಪ ಸಾಬೀತುಪಡಿಸಲಿ, ಇಲ್ಲ ಆರೋಪಕ್ಕೆ ದಾಖಲೆ ಕೊಡಬೇಕು, ಇಲ್ಲ ಕ್ಷಮೆ ಕೇಳಬೇಕು.ಇವರೆಡು ಮಾಡದಿದ್ದರೆ ತಾಯಿ ನೀನೇ ನೋಡಿಕೊಳ್ಳಬೇಕು. ಅವರಿಗೆ ಸರಿಯಾದ ಶಿಕ್ಷೆ ನೀನೇ ಕೊಡಬೇಕು ಅಂತಾ ಮೂಕಾಂಬಿಕಾ ದೇವಿ ಮೊರೆ ಹೋಗಿದ್ದಾರೆ ಪ್ರಮೋದ್ ಮುತಾಲಿಕ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸಿದ್ದು ಸಿಎಂ ಆಗಲೆಂದು ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ: 101 ತೆಂಗಿನಕಾಯಿ ಒಡೆದ ಅಭಿಮಾನಿಗಳು

Related Video