Asianet Suvarna News Asianet Suvarna News

ಸಿದ್ದರಾಮಯ್ಯ ಬುಡಕ್ಕೆ ಮತ್ತೊಂದು ಬಾಂಬ್ ಎಸೆದ ಕುಮಾರಸ್ವಾಮಿ; HDK ಹೇಳಿದ ಸಾಕಮ್ಮನ ಆ ಸ್ಟೋರಿಯೇನು?

ರಾಜ್ಯ ರಾಜಕೀಯದಲ್ಲಿ ಹೊಸ ಕೋಲಾಹಲವೇ ಶುರುವಾಗಿದೆ. ಎಲ್ಲರ ಕಣ್ಣೀಗ ಮೈಸೂರಿನಲ್ಲಿರುವ ಮುಡಾ ಕಚೇರಿ ಮೇಲೆ. ಅಲ್ಲಿ ನಡೆದಿದೆ ಎನ್ನಲಾಗಿರುವ ಕರ್ಮಕಾಂಡದ ಜನ್ಮ ಜಾಲಾಡೋಕೆ ಎಂಟ್ರಿ ಕೊಟ್ಟಿದೆ ಇ.ಡಿ. 3 ನೋಟಿಸ್‌ಗೆ ಡೋಂಟ್ ಕೇರ್‌ ಅಂದಿದ್ರಿಂದ 20 ಅಧಿಕಾರಿಗಳೇ ಈಗ ಮುಡಾ ಬುಡಕ್ಕೆ ಬಂದಿದ್ದಾರೆ. ಲೋಕಯುಕ್ತದ ಕಂಟಕದಲ್ಲಿರುವ ಸಿದ್ದರಾಮಯ್ಯ ಸುತ್ತ ಇ.ಡಿ ಬಲೆಯು ವ್ಯಾಪಿಸುತ್ತಿದೆ. ಶೇಕ್ ಆಗ್ತಿರೋ ಕುರ್ಚಿ ಮೇಲೆ ಕೂತಿರೋ ಸಿಎಂಗೆ ಟೆನ್ಷನ್ ಹೆಚ್ಚಾಗಿದೆ. ಇದೇ ಈ ಹೊತ್ತಿನ ವಿಶೇಷ ಸಿಎಂಗೆ ಇ.ಡಿ ಇಕ್ಕಳ.

First Published Oct 19, 2024, 1:41 PM IST | Last Updated Oct 19, 2024, 1:41 PM IST

ಮುಡಾ ಪ್ರಕರಣದ  ಒಂದಿಷ್ಟು ದಾಖಲೆ ಪರಿಶೀಲನೆ ಮಾಡೋದಕ್ಕೆ ಮೈಸೂರಿನ ಮುಡಾ ಕಚೇರಿಗೆ ಇ.ಡಿ ಬಂದಿದೆ. ಆದ್ರೆ ಅಲ್ಲಿ ಯಾವ ದಾಖಲೆಯೂ ಇಲ್ವಂತೆ. ಹೀಗಂತ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಹಾಗಿದ್ರೆ ಅವರ ಆರೋಪದಂತೆ ಆ ದಾಖಲೆಗಳು ಏನಾದ್ವು? ಎಲ್ಲೋದ್ವು? ಎಂಬುದರ ಕುರಿತ ವರದಿ ಇಲ್ಲಿದೆ.