Asianet Suvarna News Asianet Suvarna News

ಸಿದ್ದರಾಮಯ್ಯ ದಲಿತ ವಿರೋಧಿ ಸಿಎಂ: ಛಲವಾದಿ ನಾರಾಯಣಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಚೇರಿಗೆ ನೇಮಕ ಮಾಡಿಕೊಂಡ 250 ಜನ ಸದಸ್ಯರಲ್ಲಿ ಒಬ್ಬರೇ ಒಬ್ಬ ದಲಿತ ವ್ಯಕ್ತಿಯಿಲ್ಲ. ಅವರು ದಲಿತ ವಿರೋಧಿ ಸಿಎಂ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರು (ಜು.24): ಸಿದ್ದರಾಮಯ್ಯ ಕಚೇರಿಗೆ ಮೊನ್ನೆ ಸಿಬ್ಬಂದಿ ನೇಮಕ‌ ಮಾಡಿಕೊಂಡಿದ್ದಾರೆ. 250 ಜನರ ನೇಮಕ ಆಗಿದೆ. ಒಬ್ಬರೂ ಅದರಲ್ಲಿ ದಲಿತರಿಲ್ಲ. ನೀವು ರಾಜೀನಾಮೆ ಕೊಟ್ಟು ಒಬ್ಬ ದಲಿತರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿ. ನಿಮ್ಮ ಹೆಸರು ಚರಿತ್ರೆಯಲ್ಲಿ ಉಳಿಯುತ್ತದೆ. ರಾಜ್ಯದ ಕಾಂಗ್ರೆಸ್‌ ನಾಯಕರಾದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರರಿಗೋ ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೋ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಿ ಎಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ತಾಕೀತು ಮಾಡಿದ್ದಾರೆ.

ಈ ಹಿಂದೆ ಮತ್ತೆ ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ‌ಮತ್ತೆ ಸ್ಪರ್ಧಿಸಿದರು. ಈ ಹಿಂದೆ‌ ಮೊಯ್ಲಿ‌ಅವರ ಅವಧಿಯಲ್ಲಿ‌ ಬಸವಲಿಂಗಪ್ಪ ಅವರನ್ನ ಮಂತ್ರಿ ಕೂಡ ಮಾಡಲಿಲ್ಲ. ಬ್ರೈನ್‌ ಹ್ಯಾಮೆರೆಜ್ ಹಾಗಿ‌‌ ಹೋಗಿಬಿಟ್ಟರು. ದಲಿತರ ಉದ್ಧಾರಕ್ಕಾಗಿ ಇಟ್ಟಿರುವ ಹಣ‌ ಅವರಿಗೇ ನೀಡಬೇಕು. ವರುಣಾ ಕ್ಷೇತ್ರದ ಜನರನ್ನೇ ಸಿದ್ದರಾಮಯ್ಯ ಕಚೇರಿಗೆ ಔಟ್ ಸೋರ್ಸ್ ನಲ್ಲಿ ಕೆಲಸಕ್ಕೆ ತಗೊಂಡಿದಾರೆ. ಆದರೆ ಅದರಲ್ಲಿ ಇಬ್ಬರೂ ಎಸ್ ಸಿಗಳು ಇಲ್ಲ. ಸಿದ್ದರಾಮಯ್ಯ ದಲಿತ ವಿರೋಧಿ ಸಿಎಂ ಆಗಿದ್ದಾರೆ ಎಂದು ಹೇಳಿದರು.

Video Top Stories