Asianet Suvarna News Asianet Suvarna News

ಆರ್‌ಎಸ್‌ಎಸ್ ನಿಷೇಧಿಸಿ ಎನ್ನುವುದು ಶುದ್ಧ ಮೂರ್ಖತನ: ಸಿಎಂ ಬೊಮ್ಮಾಯಿ

Basavaraj Bommai: ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ ಎಂದು ಹೇಳಿಕೆ ಕೊಡುವುದೇ ದುರ್ದೈವ ಎಂದು ಸಿಎಂ ಹೇಳಿದ್ದಾರೆ 

ಬೆಂಗಳೂರು (ಸೆ. 30): "ದೇಶಭಕ್ತ ಸಂಘಟನೆಯನ್ನು ಪಿಎಫ್‌ಐಗೆ (PFI) ಹೋಲಿಸುವುದು ಸರಿಯಲ್ಲ, ಆರ್‌ಎಸ್‌ಎಸ್ (RSS) ನಿಷೇಧಿಸಿ ಎನ್ನುವುದು ಶುದ್ಧ ಮೂರ್ಖತನ" ಎಂದು ಸಿಎಂ ಬಸವಾರಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಕಾಂಗ್ರೆಸ್‌ (Congress) ವಿರುದ್ಧ ಕಿಡಿಕಾರಿರುವ ಅವರು "ಕೆಲವರು ಪಿಎಫ್‌ಐ ಬ್ಯಾನ್‌ (PFI Ban) ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಆರ್‌ಎಸ್‌ಎಸ್‌ ಬ್ಯಾನ್‌ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ. ರಾಜಕೀಯ ತುಷ್ಟೀಕರಣದ ಫಲವೇ ಪಿಎಫ್‌ಐ, ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ ಎಂದು ಹೇಳಿಕೆ ಕೊಡುವುದೇ ದುರ್ದೈವ " ಎಂದಿದ್ದಾರೆ. 

ಪಿಎಫ್‌ಐ ಬ್ಯಾನ್ ಮಾಡಿದ್ರೆ ಶಾಂತಿ ನೆಲೆಸುತ್ತೆ ಅನ್ನೋ ನಂಬಿಕೆ ನನಗಿಲ್ಲ: ಕುಮಾರಸ್ವಾಮಿ