Asianet Suvarna News Asianet Suvarna News

'ಮುನಿರತ್ನ ತಾಯಿಯನ್ನು ಮಾರಾಟ ಮಾಡಿದ್ದಾನೆ ಅಂತಿರಲ್ಲಾ, ತೀರಿ ಹೋಗಿರುವ ಅಮ್ಮನನ್ನು ಎಲ್ಲಿಂದ ತರಲಿ'

ಮುನಿರತ್ನ ಅವರ ತಾಯಿಯನ್ನು ಬಿಜೆಪಿ ಪಕ್ಷಕ್ಕೆ ಮಾರಾಟ ಮಾಡಿದ್ದಾನೆ' ಎಂದು ಕಾಂಗ್ರೆಸ್ ನಾಯಕರು ಮಾತಾಡ್ತಾರೆ. ಆಗ ಅಲ್ಲಿಯೇ ಇದ್ದ ನಮ್ಮ ಕಾರ್ಯಕರ್ತರು ಮಾತನ್ನು ವಾಪಸ್ ಪಡೆಯಬೇಕು ಅಂತ ಧರಣಿ ಮಾಡುತ್ತಾರೆಯೇ ವಿನಃ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ' ಎಂದು ಮುನಿರತ್ನ ಹೇಳಿದ್ದಾರೆ. 

ಬೆಂಗಳೂರು (ಅ. 28): ಮುನಿರತ್ನ ಅವರ ತಾಯಿಯನ್ನು ಬಿಜೆಪಿ ಪಕ್ಷಕ್ಕೆ ಮಾರಾಟ ಮಾಡಿದ್ದಾನೆ' ಎಂದು ಕಾಂಗ್ರೆಸ್ ನಾಯಕರು ಮಾತಾಡ್ತಾರೆ. ಆಗ ಅಲ್ಲಿಯೇ ಇದ್ದ ನಮ್ಮ ಕಾರ್ಯಕರ್ತರು ಮಾತನ್ನು ವಾಪಸ್ ಪಡೆಯಬೇಕು ಅಂತ ಧರಣಿ ಮಾಡುತ್ತಾರೆಯೇ ವಿನಃ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ' ಎಂದು ಮುನಿರತ್ನ ಹೇಳಿದ್ದಾರೆ. 

'ಸಿದ್ದರಾಮಯ್ಯನವರೇ ನಿಮಗೆ ಧಮ್ ಇದ್ರೆ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಿ'

ಕಾಂಗ್ರೆಸ್ ನಾಯಕರ ಲಘು ಹೇಳಿಕೆಗೆ ಪ್ರತಿಕ್ರಿಯಿಸುತ್ತಾ 'ನನ್ನ ಬಗ್ಗೆ ಟೀಕೆ ಮಾಡುತ್ತಲೇ ಇದ್ದೀರಿ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದೀರಿ. ಅದಕ್ಕೆ ನೀವು ಸ್ವತಂತ್ರರು. ಆದರೆ 25 ವರ್ಷದ ಹಿಂದೆ ತೀರಿ ಹೋಗಿರುವ ನನ್ನ ತಾಯಿಯ ಬಗ್ಗೆ ಈ ರೀತಿ ಮಾತಾಡೋದು ನಿಮಗೆ ಶೋಭೆ ತರುತ್ತಾ? ತೀರಿ ಹೋಗಿರುವ ತಾಯಿಯನ್ನು ಎಲ್ಲಿಂದ ತರಲಿ? ಎಲ್ಲಿಂದ ಮಾರಾಟ ಮಾಡಲಿ? ಎಂದು ಕಣ್ಣೀರು ಹಾಕಿದ್ದಾರೆ. 

Video Top Stories