
ರಾರಾದಲ್ಲಿ ಕೈ- ಕೇಸರಿ ಕಲಿಗಳ ಮಾರಾಮಾರಿ: ಸಿದ್ದು ಘರ್ಜನೆ, ಮುನಿರತ್ನ ಕಣ್ಣೀರು ವರ್ಕೌಟ್ ಆಗುತ್ತಾ?
ರಾಜಾರಾಜೇಶ್ವರಿ ಉಪಚುನಾವಣಾ ಅಖಾಡದಲ್ಲಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವಾಗ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಇದರಿಂದ ಕೈ ಲಿಗಳು ಸಿಡಿದು ನಿಂತಿದ್ದಾರೆ.
ಬೆಂಗಳೂರು (ಅ. 29): ರಾಜಾರಾಜೇಶ್ವರಿ ಉಪಚುನಾವಣಾ ಅಖಾಡದಲ್ಲಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವಾಗ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಇದರಿಂದ ಕೈ ಲಿಗಳು ಸಿಡಿದು ನಿಂತಿದ್ದಾರೆ.
Add Asianetnews Kannada as a Preferred Source

'ಜಯಚಂದ್ರರನ್ನು ಮುದಿ ಎತ್ತು ಅನ್ನೋದಾದರೆ ಮೊದಿ, ಬಿಎಸ್ವೈ, ದೇವೇಗೌಡ್ರು ಎಳಸು ಎತ್ತುಗಳೇ'?
ಇನ್ನೊಂದು ಕಡೆ ಮುನಿರತ್ನ ತಾಯಿಯ ಕುರಿತು ಹೇಳಿಕೆಯಿಂದ ಕಣ್ಣೀರು ಹಾಕಿದ್ದಾರೆ. ‘ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರು ಸ್ವತಂತ್ರರಾಗಿದ್ದಾರೆ. ಆದರೆ, ನಿಧನ ಹೊಂದಿರುವ ತಾಯಿ ಬಗ್ಗೆ ಮಾತನಾಡಬೇಡಿ. ಇದು ನಿಮಗೆ ಶೋಭೆ ತರುವುದಿಲ್ಲ. 25 ವರ್ಷದ ಹಿಂದೆ ನಿಧನ ಹೊಂದಿರುವ ತಾಯಿಯನ್ನು ಹೇಗೆ ಮಾರಾಟ ಮಾಡಿಕೊಳ್ಳಲಿ? ಇಂತಹ ಹೇಳಿಕೆ ನೀಡಬೇಡಿ' ಎಂದು ಹೇಳಿದ್ದಾರೆ.