Asianet Suvarna News Asianet Suvarna News

ಕಪ್ಪುಬಾವುಟ ಹಿಡಿದು ಕೇಂದ್ರ ಗೃಹ ಸಚಿವರ ಕಾರು ತಡೆದಿದ್ದೆ: ವಾಟಾಳ್ ನಾಗರಾಜ್ 'ಚಳವಳಿ' ನೆನಪು

ಅಂದಿನ ಕೇಂದ್ರದ ಗೃಹ ಮಂತ್ರಿ ವೈ.ಬಿ ಚವ್ಹಾಣ ಬೆಂಗಳೂರಿಗೆ ಬರುವಾಗ ಅವರಿಗೆ ಕಪ್ಪು ಬಾವುಟ ಹಿಡಿದು ಅವರ ಕಾರು ತಡೆದಿದ್ದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ತೀರ್ಮಾನವಾಗಿದೆ, ಹೀಗಾಗಿ ಆಯೋಗವನ್ನು ರಚನೆ ಮಾಡಬಾರದು ಎಂದು ಅಂದಿನ ಕೇಂದ್ರ ಗೃಹ ಮಂತ್ರಿ ಬೆಂಗಳೂರಿಗೆ ಬರುವಾಗ ಅವರಿಗೆ ಕಪ್ಪು ಬಾವುಟ ಹಿಡಿದು ಅವರ ಕಾರು ತಡೆಯುತ್ತೇನೆ. ಈ ಶಕ್ತಿ ಯಾರಿಗೆ ಇದೆ ಹೇಳಿ ಎಂದು ವಾಟಾಳ್ ನಾಗರಾಜ್ ಹಳೆ ನೆನಪು ಮೆಲುಕು ಹಾಕಿದರು. ಆ ಸಂದರ್ಭದಲ್ಲಿ ವಾಟಾಳ್‌ ನಾಗರಾಜ್‌'ರನ್ನು ಬಂಧನ ಮಾಡಲೇಬೇಕು ಎಂದು ಗರುಡಾಚಾರ್‌ ಆದೇಶ ಹೊರಡಿಸುತ್ತಾರೆ. ನಿಮ್ಮ ಹಣೆಯಲ್ಲಿ ಬರೆದಿಲ್ಲ ನನ್ನನ್ನು ಹಿಡಿಯುವುದು ಎಂದು ನಾನು ಆಗ ಹೇಳುತ್ತೇನೆ ಎಂದು ತಮ್ಮ ಹೋರಾಟ ಅನುಭವ ಹಂಚಿಕೊಂಡರು.