ನ್ಯೂಸ್‌ ಅವರ್ ಸ್ಪೆಶಲ್‌ನಲ್ಲಿ ಸಿ.ಟಿ.ರವಿ: ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಹೇಳಿದ್ದೇನು?

ಮಾಜಿ ಶಾಸಕ ಸಿ.ಟಿ.ರವಿ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ಹೌದು!  ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದ ಅವರು ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.

First Published Aug 5, 2023, 11:45 PM IST | Last Updated Aug 5, 2023, 11:45 PM IST

ಬೆಂಗಳೂರು (ಆ.05): ಶಾಸಕ ಸಿ.ಟಿ.ರವಿ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ಹೌದು!  ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದ ಅವರು ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು. ನಾನು ಬಿಜೆಪಿ ಕಾರ್ಯಕರ್ತ ಎಂಬ ಮನೋಭಾವನೆಯಲ್ಲಿ ಬದುಕಿರುತ್ತೀನಿ. ಚುನಾವಣೆಯಲ್ಲಿ ಸೋಲಲು ನಾನು ಪ್ರಮುಖ ಕಾರಣಕರ್ತ. ನಮ್ಮ ಸರ್ಕಾರದಲ್ಲಿ ಜನರ ಅಪೇಕ್ಷೆ ಮೇರೆಗೆ ತಕ್ಕಂತೆ ಇನಷ್ಟು ಕೊಡುವುದಕ್ಕೆ ಅವಕಾಶ ಇತ್ತು. ಅದರ ಜೊತೆಗೆ ಒಳಮೀಸಲಾತಿ ಹೊಡೆತ ಹಾಗೂ ಅದನ್ನು ಮನವರಿಕೆ ಮಾಡಿಕೊಳ್ಳುವುದರಲ್ಲಿ ವಿಫಲವಾಗಿದ್ದು, ಹಲವು ಕಾರಣಕ್ಕೆ ಸೋತಿದ್ದೇವೆ ಎಂದರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದಿದೆ. ನಮ್ಮ ಬಿಜೆಪಿ ಪಕ್ಷವು ಸದನದಲ್ಲಿ ವಿಪಕ್ಷ ನಾಯಕನಿಲ್ಲದೇ ಸದನದಲ್ಲಿ ಚರ್ಚೆ ನಡೆಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.