News Hour: ಹಿಜಾಬ್, ಹಲಾಲ್, ಧರ್ಮ ಸಂಘರ್ಷ ಕುರಿತು ಎಚ್ಡಿಕೆ ಖಡಕ್ ಮಾತು
* ಹಿಜಾಬ್, ಹಲಾಲ್ ಬಗ್ಗೆ ಕುಮಾರಸ್ವಾಮಿ ಸ್ಪಷ್ಟ ನಿಲುವು
* ಸರ್ವಜನಾಂಗದ ಶಾಂತಿಯ ತೋಟ... ನಮ್ಮ ನಿಲುವು
* ಸ್ಪೆಶಲ್ ನ್ಯೂಸ್ ಅವರ್ ನಲ್ಲಿ ಕುಮಾರಸ್ವಾಮಿಗೆ ಪ್ರಶ್ನೆಗಳ ಮಳೆ
ಬೆಂಗಳೂರು(ಏ. 10) ಬಹುಚರ್ಚಿತ ಹಿಜಾಬ್(Hijab), ಹಲಾಲ್(Halal), ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕುಮಾರಸ್ವಾಮಿ (HD Kumaraswamy) ಮಾತನಾಡಿದ್ದಾರೆ. ಹಿಜಾಬ್ ಬಗ್ಗೆ ಆರು ವಿದ್ಯಾರ್ಥಿನಿಯರು (Students)ದನಿ ಎತ್ತಿದಾಗಲೇ ಈ ವಿಚಾರವನ್ನು ಇಲ್ಲಿಯೇ ಕೊನೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ JDS ಸಿದ್ಧತೆ, ಇಬ್ರಾಹಿಂ ಜೊತೆಗೆ ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಗಾಳ
ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಸೇರಿ ಸರ್ಕಾರ ಮಾಡಿದ ಘಟನೆಯನ್ನು ಕುಮಾರಸ್ವಾಮಿ ವಿವರಿಸಿದ್ದಾರೆ. ನಮ್ಮ ನಿಲುವು ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾತನ್ನು ಪುನರ್ ಉಚ್ಛಾರ ಮಾಡಿದ್ದಾರೆ. ಹಾಗಾದರೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ನಿಲುವು ಏನಾಗಿರಲಿದೆ?