ವಿಧಾನಸಭಾ ಚುನಾವಣೆಗೆ JDS ಸಿದ್ಧತೆ, ಇಬ್ರಾಹಿಂ ಜೊತೆಗೆ ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಗಾಳ
ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಇಬ್ರಾಹಿಂ ಬೆನ್ನಲ್ಲೇ, ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಜೆಡಿಎಸ್ ಗಾಳ ಹಾಕಿದೆ.
ಬೆಂಗಳೂರು (ಏ. 07): ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಇಬ್ರಾಹಿಂ ಬೆನ್ನಲ್ಲೇ, ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಜೆಡಿಎಸ್ ಗಾಳ ಹಾಕಿದೆ. ಇಬ್ರಾಹಿಂ ಮೂಲಕ ರೋಷನ್ ಬೇಗ್ರನ್ನು ಕರೆ ತರಲು ಪ್ರಯತ್ನಿಸುತ್ತಿದೆ. ಈಗಾಗಲೇ ಸಿ ಎಂ ಇಬ್ರಾಹಿಂ ಅವರು ರೋಷನ್ ಬೇಗ್ ಅವರ ಜೊತೆ ಚರ್ಚೆ ನಡೆಸಿದ್ದಾರೆ.
ಇನ್ನೊಂದು ಕಡೆ ಸಿ.ಎಂ ಇಬ್ರಾಹಿಂ, ರೋಷನ್ ಬೇಗ್ ಭೇಟಿ ವಿಚಾರಕ್ಕೆ ಸಿದ್ದು ನೋ ಕಮೆಂಟ್ಸ್ ಎಂದಿದ್ದಾರೆ. 'ಇಬ್ರಾಹಿಂ, ರೋಷನ್ ಬೇಗ್ ನಮ್ಮ ಪಾರ್ಟಿಯಲ್ಲಿ ಇಲ್ಲ. ಅವರ ಬಗ್ಗೆ ಮಾತನಾಡಿ ಏನು ಪ್ರಯೋಜನ..? ಎಲ್ಲಿಯಾದರೂ ನಿಂತುಕೊಳ್ಳಲಿ, ಜನ ತೀರ್ಮಾನ ಮಾಡುತ್ತಾರೆ' ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.