
ಬಿಜೆಪಿ ಸೇರಿಸಿರುವ ಕಾಂಗ್ರೆಸ್ ನಾಯಕರು ಮರಳಿ ಗೂಡಿಗೆ, ಆಪರೇಶನ್ ಹಸ್ತ ಕುರಿತು ಮುನಿರತ್ ಪ್ರತಿಕ್ರಿಯೆ!
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನಾನು ರಾಜಕೀಯಿಂದ ನಿವೃತ್ತಿಯಾಗುತ್ತೇನೆ ಹೊರತು ಕಾಂಗ್ರೆಸ್ ಸೇರುವುದಿಲ್ಲ ಎಂದು ಕಾಂಗ್ರೆಸ್ ಮೆಗಾ ಆಪರೇಶನ್ ಕುರಿತು ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಆಪರೇಶನ್ ಹಸ್ತ ಶುರುಮಾಡಿದೆ ಅನ್ನೋ ಮಾತಗಳು ಕೇಳಿಬಂದಿದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿಕೊಂಡ ಶಾಸಕರ ಪೈಕಿ 6 ನಾಯಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜರಾಜೇಶ್ವರಿ ಶಾಸಕ, ಬಿಜೆಪಿ ನಾಯಕ ಮುನಿರತ್ನ, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಹೊರತು ಕಾಂಗ್ರೆಸ್ ಸೇರಲ್ಲ ಎಂದಿದ್ದಾರೆ.
Add Asianetnews Kannada as a Preferred Source
