
ಬೆಂಗ್ಳೂರಿನಿಂದ ಜೆಡಿಎಸ್ ಭದ್ರಕೋಟೆ ಹಾಸನಕ್ಕೆ: ಕುತೂಹಲ ಮೂಡಿಸಿದ ಬಿಎಸ್ವೈ ಆದೇಶ..!
ಬೆಂಗಳೂರು ಭಾಗದ ಶಾಸಕರಾಗಿರುವ ಕೆ.ಗೋಪಾಲಯ್ಯರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು (ಜೂನ್ 02): ಈಗಾಗಲೇ ಸಚಿವ ನಾರಾಯಣಗೌಡ ಅವರಿಗೆ ಮಂಡ್ಯ ಉಸ್ತುವಾರಿ ನೀಡಲಾಗಿದೆ. ಈಗ ಗೋಪಾಲಯ್ಯನವರಿಗೆ ಹಾಸನ ಉಸ್ತುವಾರಿ ವಹಿಸಲಾಗಿದೆ. ಇವರಿಬ್ಬರು ಮೂಲ ಜೆಡಿಎಸ್ನಿಂದಲೇ ಬಂದಂತವರು.
ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಮಧ್ಯೆ ಎರಡು ಹೊಸ ಜಿಲ್ಲಾ ಉಸ್ತುವಾರಿಗಳ ನೇಮಕ
ಅಲ್ಲದೆ, ಪ್ರಸ್ತುತ ಜೆಡಿಎಸ್ ಭದ್ರಕೋಟೆಯ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.ಆದರೆ, ಬೆಂಗಳೂರು ಭಾಗದ ಶಾಸಕರಾಗಿರುವ ಕೆ.ಗೋಪಾಲಯ್ಯರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.