MB Patil: ಬಿಜೆಪಿ ಪಾಪದ ಕೊಡ ನಾವು ಹೊರುತ್ತಿದ್ದೇವೆ | Kannada News | Suvarna News
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿಕೆ. ಫೆ 11 ರಿಂದ 14 ರ ವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರು ನಲ್ಲಿ ನಡೆದಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ. ವಿಜಯಪುರ ಜಿಲ್ಲೆಗೆ ಉತ್ತರ ಕರ್ನಾಟಕ ಭಾಗಕ್ಕೆ ಬಂಡವಾಳ ಹರಿದು ಬಂದಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿ ಸಮಾವೇಶದಲ್ಲೊಂದು. ನಮ್ಮ ತಂಡ ಪ್ರಗತಿಯ ಮರುಕಲ್ಪನೆಯಾಗಿ ಕೆಲಸ ಮಾಡಿದೆ. ಪರಿಸರ ಸ್ನೇಹಿಯಾಗಿ ಕೆಲಸ ಮಾಡುವದು, ಎಲ್ಲವನ್ನೂ ಒಳಗೊಂಡು ಹಾಗೂ ಬದಲಾವಣೆಗೆ ಎದುರಿಸುವ ಸಾಮರ್ಥ್ಯ ಇರಬೇಕು ಹೀಗೆ ಹಲವು ಆಯಾಮದಲ್ಲಿ ಸಮಾವೇಶ ನಡೆದಿದೆ. ರಾಜನಾಥ್ ಸಿಂಗ್ ಅವರು ಸೇರಿದಂತೆ ಸಿಎಂ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಅನೇಕ ದುಂಡು ಮೇಜಿನ ಸಭೆಗಳು ನಡೆದವು. ಪ್ರಥಮ ಬಾರಿಗೆ 60 ಕ್ಕೂ ಅಧಿಕ ಉದ್ಯಮಿದಾರರು ಭಾಗಿಯಾಗಿದ್ದರು ವಿಕ್ರ ಕಿರ್ಲೋಸ್ಕರ್, ಸಜ್ಜನ ಜಿಂದಾಲ್ ಸೇರಿದಂತೆ ಅನೇಕ ಸಾಧಕರಿಗೆ ಪ್ರಶಸ್ತಿ ವಿತರಿಸಲಾಗಿದೆ. ಇದರಲ್ಲಿ 10 ಲಕ್ಷ 27 ಸಾವಿರ ಕೋಟಿ ಬಂಡವಾಳ ಹೂಡಿಕೆದಾರರ ಒಪ್ಪಂದವಾಗಿದೆ. 6 ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared